ಟೈಲರ್ ಕನ್ಹಯ್ಯಲಾಲ್ ಶಿರಚ್ಛೇದ ಪ್ರಕರಣ, ಇನ್ನೂ ಇಬ್ಬರು ಆರೋಪಿಗಳ ಬಂಧನ

ಟೈಲರ್​​ ಆಗಿ ಕೆಲಸ ಮಾಡುತ್ತಿದ್ದ ಕನ್ಹಯ್ಯಲಾಲ್​​ ಬಿಜೆಪಿ ಮಾಜಿ ವಕ್ತಾರೆ ನೂಪುರ್​ ಶರ್ಮಾ ಪರವಾಗಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿಕೊಂಡಿದ್ದರಿಂದ, ದುಷ್ಕರ್ಮಿಗಳು ಬಟ್ಟೆ ಹೊಲಿಸುವ ನೆಪದಲ್ಲಿ ಕನ್ಹಯ್ಯಲಾಲ್​ ಅಂಗಡಿಗೆ ತೆರಳಿ ಅವರ ಶಿರಚ್ಛೇದ ಮಾಡಿದ್ದರು.

ಇದೀಗ ಉದಯಪುರದಲ್ಲಿ ಟೈಲರ್​ ಕನ್ಹಯ್ಯಲಾಲ್​ ಶಿರಚ್ಛೇದ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಗಳು ಇಡೀ ಅಪರಾಧದ ಹಿಂದಿನ ಸಂಚು ರೂಪಿಸುವಲ್ಲಿ ಹಾಗೂ ಸಿದ್ಧತೆಯಲ್ಲಿ ಭಾಗಿಯಾಗಿದ್ದರು ಎಂದು ಉದಯಪುರ ಐಜಿ ಪ್ರಫುಲ್ಲ ಕುಮಾರ್​ ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ಹಿಂದೆ ಬಂಧಿಸಿದ್ದ ಇಬ್ಬರು ಆರೋಪಿಗಳನ್ನು ಅಜ್ಮೀರ್ ನಲ್ಲಿರುವ ಜೈಲಿನಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.

ಕೊಲೆಯ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿ, ಶಿರಚ್ಛೇದದ ಹೊಣೆಯನ್ನು ಹೊತ್ತಿದ್ದ ರಿಯಾಜ್​ ಅಖ್ತರಿ ಹಾಗೂ ಘೌಸ್​ ಮೊಹಮ್ಮದ್​​ ಪ್ರಧಾನಿ ಮೋದಿ ಹಾಗೂ ನೂಪುರ್​ ಶರ್ಮಾರಿಗೂ ಬೆದರಿಕೆಯನ್ನು ನೀಡಿದ್ದರು. ಘಟನೆ ನಡೆದ ಮಾರನೇ ದಿನವೇ ರಾಜಸ್ಥಾನ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

Leave A Reply

Your email address will not be published.