ಸೈಕಲ್ ಗೆ ಕಾರು ಡಿಕ್ಕಿ ಹೊಡೆದು ಬಂಟ್ವಾಳದ ಯುವಕ ಸಾವು!

ಬೆಂಗಳೂರು : ಕಾರೊಂದು ಸೈಕಲ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.

ಮೃತಪಟ್ಟ ಯುವಕ ಬಂಟ್ವಾಳ ಕಾಮಾಜೆ ನಿವಾಸಿ
ಶಿವಪ್ರಸಾದ್ (33).

ಬೆಂಗಳೂರಿನ ಏರ್‌ಪೋರ್ಸ್‌ನಲ್ಲಿ ಅವರು ಎಸಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ಕ್ವಾರ್ಟಸ್‌ನಿಂದ 250 ಮೀಟರ್ ದೂರವಿರುವ ಕಚೇರಿಗೆ ಶುಕ್ರವಾರ ಸೈಕಲ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಮಹಿಳೆ ಚಲಾಯಿಸಿಕೊಂಡು ಬಂದ ಕಾರೊಂದು ಹಿಂದಿನಿಂದ ಶಿವಪ್ರಸಾದ್ ಅವರ ಸೈಕಲ್‌ಗೆ ಢಿಕ್ಕಿ ಹೊಡೆದಿದೆ.

ಢಿಕ್ಕಿಯ ರಭಸಕ್ಕೆ ಶಿವಪ್ರಸಾದ್ ಡಿವೈಡರ್ ಮೇಲೆ ಬಿದ್ದು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತ ಶರೀರವನ್ನು ನಿನ್ನೆ ಊರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಶಿವಪ್ರಸಾದ್ ಅವರಿಗೆ ಕಳೆದ ಐದು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದು, ಮೊದಲು ರಾಯಿಯಲ್ಲಿದ್ದ ಕುಟುಂಬ ಹತ್ತು ವರ್ಷಗಳಿಂದ ಕಾಮಾಜೆಯಲ್ಲಿ ನೆಲೆಸಿತ್ತು. ಸುಮಾರು ಐದು ವರ್ಷಗಳ ಹಿಂದೆ ಅವರಿಗೆ ಏರ್‌ಫೋರ್ಸ್‌ನಲ್ಲಿ ಕೆಲಸ ದೊರಕಿತ್ತು.

Leave A Reply

Your email address will not be published.