ರೈತರೇ, ನೀವು ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದರೆ, ಈಗಲೇ ಪಡಿತರ ಚೀಟಿ ನೋಂದಾಯಿಸಿ, ರೂ.4000 ನಿಮ್ಮದಾಗಿಸಿ!

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ(ಪಿಎಂ ಕಿಸಾನ್ ಸಮ್ಮಾನ್ ನಿಧಿ) ಮತ್ತೆ ಬದಲಾವಣೆಗೊಂಡಿದೆ. ಈಗ ಕಿಸಾನ್ ಯೋಜನೆ(ಪಿಎಂ ಕಿಸಾನ್ ಕಂತು) ನೋಂದಣಿಗೆ ಪಡಿತರ ಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ. ನೀವೂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದರೆ, ತಕ್ಷಣವೇ ಪಡಿತರ ಚೀಟಿಯನ್ನು ನೋಂದಾಯಿಸಿ.

ಪಡಿತರ ಚೀಟಿ ಸಂಖ್ಯೆಯನ್ನು ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ನಮೂದಿಸುವುದು ಕಡ್ಡಾಯವಾಗಿದೆ. ನೋಂದಣಿಯಲ್ಲಿ ಪಡಿತರ ಚೀಟಿ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿದೆ. ಅದೇ ಸಮಯದಲ್ಲಿ ಪಡಿತರ ಚೀಟಿಯ ಕಡ್ಡಾಯ ಅವಶ್ಯಕತೆಯೊಂದಿಗೆ, ನೋಂದಣಿ ಸಮಯದಲ್ಲಿ ದಾಖಲೆಗಳ ಸಾಫ್ಟ್ ಕಾಪಿಗಳನ್ನು (ಪಿಡಿಎಫ್) ಮಾತ್ರ ಮಾಡಿ ಪೋರ್ಟಲ್ ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಇದಲ್ಲದೇ ರೈತರಿಗೆ ಕೆವೈಸಿ ಕಡ್ಡಾಯಗೊಳಿಸಲಾಗಿದೆ.

ನೋಂದಣಿ ವೇಳೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಮತ್ತು ಘೋಷಣೆಯ ಹಾರ್ಡ್ ಕಾಪಿಗಳನ್ನು ಕಡ್ಡಾಯವಾಗಿ ಸಲ್ಲಿಸುವುದನ್ನು ಸಹ ಕೈಬಿಡಲಾಗಿದೆ. ಈಗ ಫಲಾನುಭವಿಗಳು ಈ ದಾಖಲೆಗಳ ಪಿಡಿಎಫ್ ಫೈಲ್ ಅನ್ನು ರಚಿಸಿ ಅದನ್ನು ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಬೇಕು. ಇದರಿಂದ ರೈತರ ಸಮಯ ಉಳಿತಾಯ ಆಗುವುದು ಮೊದಲ ಉದ್ದೇಶ.

ಬ್ಯಾಂಕ್ ಖಾತೆಯನ್ನು ಆಧಾರ್ ನೊಂದಿಗೆ ಲಿಂಕ್ ಮಾಡುವುದು ಅವಶ್ಯಕ. ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಇದು
ಇಲ್ಲದೆ ನೀವು ಈ ಯೋಜನೆಯ ಲಾಭವನ್ನು ಪಡೆಯಲು
ಸಾಧ್ಯವಾಗುವುದಿಲ್ಲ.

ನಿಮ್ಮ ದಾಖಲೆಗಳನ್ನು ಪಿಎಂ ಕಿಸಾನ್ ವೆಬ್‌ಸೈಟ್ pmkisan.gov.in ನಲ್ಲಿ ಅಪ್ ಲೋಡ್ ಮಾಡಿ.
ಆಧಾರ್ ಲಿಂಕ್ ಮಾಡಲು, ನೀವು ಫಾರ್ಮರ್ ಕಾರ್ನರ್ ಆಯ್ಕೆಗೆ ಹೋಗಿ ಮತ್ತು ಆಧಾರ್ ವಿವರವನ್ನು ಸಂಪಾದಿಸು ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನವೀಕರಿಸಿ.

ಈ ಯೋಜನೆಯಡಿಯಲ್ಲಿ ಪಿಎಂ ಕಿಸಾನ್‌ನ 11 ನೇ ಕಂತನ್ನು ಸ್ವೀಕರಿಸದ ರೈತರ ಖಾತೆಯು ಈಗ ಹಿಂದಿನ ಮೊತ್ತವನ್ನು ಮುಂದಿನ ಕಂತಿನೊಂದಿಗೆ ಪಡೆಯುತ್ತದೆ. ಅಂದರೆ, ರೈತರಿಗೆ ಈಗ 4000 ರೂ. ಜಮಾ ಆಗಲಿದೆ.

ಈ ಸೌಲಭ್ಯವು ನೋಂದಾಯಿಸಿದ ರೈತರಿಗೆ ಮಾತ್ರ ಲಭ್ಯವಿರುತ್ತದೆ. ನಿಮ್ಮ ಅರ್ಜಿಯನ್ನು ಸ್ವೀಕರಿಸಿದ್ದರೆ ಮತ್ತು ಕೆಲವು ಕಾರಣಗಳಿಂದ ನಿಮ್ಮ ಕಂತು ಬಾರದಿದ್ದರೆ ಒಟ್ಟಿಗೆ 4000 ರೂ. ಸಿಗಲಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಖಾತೆಗೆ 11 ಕಂತುಗಳನ್ನು ಜಮಾ ಮಾಡಲಾಗಿದೆ. ವಾರ್ಷಿಕವಾಗಿ ತಲಾ 2,000 ರೂಪಾಯಿಗಳ ಮೂರು ಕಂತು ಮೂರು ಕಂತು 6000 ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುವುದು.

Leave A Reply

Your email address will not be published.