ಇರುವೆ ಗೂಡಿಗೆ ಹೊಕ್ಕಿರುವ ಹಾವು ಸಿದ್ದರಾಮಯ್ಯ

ಹುಬ್ಬಳ್ಳಿ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇರುವೆಗಳು ಕಟ್ಟಿದ ಗೂಡಿನಲ್ಲಿ ಹಾವಿನಂತೆ ಹೊಕ್ಕಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಆರ್.ಎಸ್.ಎಸ್. ಮತ್ತು ಬಿಜೆಪಿಯನ್ನು ಎಷ್ಟು ಟೀಕಿಸಿದರೆ,‌ ಇಟಲಿ ನಾಯಕರಿಗೆ ಅಷ್ಟು ಹತ್ತಿರವಾಗುತ್ತೇನೆ ಎಂದು ಭಾವಿಸಿದ್ದಾರೆ. ಮೂಲ ಕಾಂಗ್ರೆಸ್ ಎಂದೋ ಹೋಗಿದೆ. ಸಿದ್ದರಾಮಯ್ಯ ಕೂಡ ಮೂಲ ಕಾಂಗ್ರೆಸ್ಸಿಗರಲ್ಲ ಎಂದರು.

ಈಗಿರುವ ನಕಲಿ‌ ಕಾಂಗ್ರೆಸ್ ನಲ್ಲಿ ನಕಲಿ ನಾಯಕ ಸಿದ್ದರಾಮಯ್ಯ. ತನ್ನ ವಿರುದ್ಧದ ಟೀಕೆಗಳಿಗೆ ಆರ್.ಎಸ್.ಎಸ್ ಯಾವತ್ತೂ ಉತ್ತರ ಕೊಡುವುದಿಲ್ಲ. ನಾವು ಆರ್.ಎಸ್.ಎಸ್. ನವರಾಗಿರುವುದರಿಂದ ಉತ್ತರ ಕೊಡುತ್ತೇವೆ. ಸಿದ್ದರಾಮಯ್ಯ ಅವರು ತಮ್ಮ‌ ಹಾಗೂ ತಮ್ಮ ಪಕ್ಷದ ಅಧ್ಯಕ್ಷರ ಮೂಲದ ಬಗ್ಗೆ, ಅವರು ಎಲ್ಲಿಗೆ ಹೋಗಿ ಬರುತ್ತಾರೆ ಎಂಬುದರ ಕುರಿತು ಮಾತಾಡುವುದಿಲ್ಲ ಎಂದು ಹೇಳಿದರು.

ಇಂತಹ ಮಾನಸಿಕತೆಯಿಂದ ಇಟಲಿ ಮೂಲದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಹತ್ತಿರವಾಗುವೆ ಎಂದು ಸಿದ್ದರಾಮಯ್ಯ ಅವರು ಭಾವಿಸಿದ್ದಾರೆ. ತಮ್ಮ ಹೊಟ್ಟೆಪಾಡಿಗಾಗಿ ಅವರು ಈ ರೀತಿ‌ ಮಾಡುತ್ತಿದ್ದಾರೆ. ಇದೀಗ ಚುನಾವಣೆ ಹತ್ತಿರ ಬರುತ್ತಿದೆ. ಹೇಗಾದರೂ ಮಾಡಿ ಮುಸಲ್ಮಾನರ ಮತಗಳನ್ನು ಪಡೆದು ಗೆಲ್ಲಬೇಕು. ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂಬ ಕನಸನ್ನು ಸಿದ್ದರಾಮಯ್ಯ ಕಾಣುತ್ತಿದ್ದಾರೆ.‌ ಒಮ್ಮೆ ಮುಖ್ಯಮಂತ್ರಿ ಆಗಿದ್ದ ಅವರನ್ನು ಜನ ಈಗಾಗಲೇ ಸೋಲಿಸಿದ್ದಾರೆ ಎಂದರು.

Leave A Reply

Your email address will not be published.