ಕಾರು ಡಿಕ್ಕಿ: ಬಾಲಕಿ ಸಾವು, ಏಳು ಜನರಿಗೆ ಗಾಯ
![](https://hosakannada.com/wp-content/uploads/2022/05/IMG-20220529-WA0000.jpg)
ಹೊಸಪೇಟೆ ಮೇ೨೮: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಬೈಲುವದ್ದಿಗೇರಿ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಬಾಲಕಿ ಮೃತಪಟ್ಟು ಏಳು ಜನರು ಗಾಯಗೊಂಡಿದ್ದಾರೆ.
![](https://hosakannada.com/wp-content/uploads/2024/07/First.jpeg)
ನಗರದ ನಿವಾಸಿ ಬಾಲಕಿ ರೋಷಿಣಿ(೧೪) ಮೃತಪಟ್ಟ ಬಾಲಕಿ. ಹೊಸಪೇಟೆಯ ಸಿರಿಸಿನಕಲ್ಲು ಪ್ರದೇಶದಿಂದ ಬಳ್ಳಾರಿಗೆ ಹೊರಟಿದ್ದರು.
![](https://hosakannada.com/wp-content/uploads/2024/07/Middle.jpeg)
ಗಾಯಾಳುಗಳನ್ನು ಉಪಚರಿಸಿದ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರು. ಸ್ಥಳಕ್ಕೆ ತಕ್ಷಣ ಆಗಮಿಸಿದ ಸಮಾಜ ಸೇವಕ ಪ್ರಕಾಶ್ ಮೆಹರವಾಡೆ ತನ್ನ ಕಾರಿನಲ್ಲೇ ನಗರದ ಉಪವಿಭಾಗ ಮಟ್ಟದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.