ಮಾನವೀಯತೆ ಮೆರೆದ ನಗರ ಆಟೋ ಚಾಲಕ

ಸಿರುಗುಪ್ಪ : ನಗರದ ಪೋಲಿಸ್ ಠಾಣೆಯಲ್ಲಿ ಆಟೋ ಚಾಲಕ ರೆಹಮಾನ್ £ನ್ನೆ ತನ್ನ ಆಟೋದಲ್ಲಿ ೬ನೇ ವಾರ್ಡಿ£ಂದ ಬಸ್‌£ಲ್ದಾಣಕ್ಕೆ ಪ್ರಯಾಣಿಸಿ ಆಟೋದಲ್ಲಿ ಹಣ ಮತ್ತು ಬಂಗಾರದ ಆಭರಣಗಳಿರುವ ಚೀಲವನ್ನು ಆಟೋದಲ್ಲಿ ಬಿಟ್ಟು ಅವಸರವಾಗಿ ಹೋಗಿದ್ದ ಪ್ರಯಾಣಿಕರಿಗೆ ಚಾಲಕ ರೆಹಮಾನ್ ಪೋಲೀಸ್ ಠಾಣೆಯಲ್ಲಿ ಮಾಹಿತಿ £Ãಡಿದಾಗ ಆಜ್ಮಾ ಅವರನ್ನು ಕರೆಸಿ ಸಿ.ಪಿ.ಐ ಯಶವಂತ ಬಿಸ್ನಳ್ಳಿ, ಜೈಭೀಮ್ ಆಟೋ ಚಾಲಕರ ವೇದಿಕೆ ಅಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನಸ್ವಾಮಿ ನೇತೃತ್ವದಲ್ಲಿ ಹಣ ಮತ್ತು ಬಂಗಾರದ ಆಭರಣಗಳಿರುವ ಚೀಲವನ್ನು ಆಜ್ಮಾಗೆ ಹಿಂತಿರುಗಿಸಿ ಮಾನವೀಯತೆ ಮರೆದಿದ್ದಾನೆ.
ನಗರದ ೬ನೇ ವಾರ್ಡಿನ £ವಾಸಿ ಆಜ್ಮಾ ಅವರು ತಮ್ಮ £ವಾಸದ ಹತ್ತಿರದ ರಸ್ತೆಯಿಂದ ಬಸ್‌£ಲ್ದಾಣಕ್ಕೆ ಆಟೋದಲ್ಲಿ ಪ್ರಯಾಣಿಸುವಾಗ ಹಣ ಮತ್ತು ಆಭರಣಗಳಿರುವ ಚೀಲವನ್ನು ಆಟೋದಲ್ಲೇ ಬಿಟ್ಟು ಅತ್ಯವಸರದಿಂದ ಬಸ್ £ಲ್ದಾಣದ ಒಳಗೆ ಹೊರಟಿದ್ದಾರೆ.

ನಂತರ ಆಟೋ £ಲ್ದಾಣದಲ್ಲಿ ಬ್ಯಾಗ್ ಗಮ£ಸಿದ ಆಟೋ ಚಾಲಕ ಚೀಲವನ್ನು ತೆಗೆದುಕೊಂಡು ಪೋಲೀಸ್ ಠಾಣೆಯಲ್ಲಿ ತಲುಪಿಸಿದ್ದಾನೆ.
ಚಾಲಕನ ಸಮಯಪ್ರಜ್ಞೆಯನ್ನು ಕೊಂಡಾಡಿದ ಸಿ.ಪಿ.ಐ ಯಶವಂತ ಬಿಸ್ನಳ್ಳಿ ಮಾತನಾಡಿ ಆಟೋ ಚಾಲನೆಯು ಸಾಮಾಜಿಕ ಸೇವೆಯಾಗಿದ್ದು, ಪ್ರಯಾಣಿಕರು ಅತ್ಯವಸರದಲ್ಲಿ ತಮ್ಮ ಲಗೇಜುಗಳನ್ನು ಮರೆತು ಹೋಗುವುದು ಸಾಮಾನ್ಯ ಆದರೆ ಮರೆತು ಹೋದ ಲಗೇಜನ್ನು ಮರಳಿ ಕೊಡುತ್ತಿರುವುದು ಚಾಲಕನ ಪ್ರಾಮಾಣಿಕತೆಯನ್ನು ಎತ್ತಿ ತೋರಿಸುತ್ತದೆ.

ಇದೇ ರೀತಿ ಆಟೋ, ಟ್ರಾö್ಯಕ್ಷಿ, ಕ್ಯಾಬ್ ಚಾಲಕರು ತಮ್ಮ ಸಮಾಜ ಸೇವೆಯೊಂದಿಗೆ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು £Ãಡಬೇಕು. ಹಾಗೂ ಅತ್ಯವಸರದಲ್ಲಿ ಬಿಟ್ಟು ಹೋದ ಲಗೇಜುಗಳನ್ನು ಗೊತ್ತಿರುವವರಿದ್ದರೆ ಮರಳಿ £Ãಡುವುದು. ಇಲ್ಲವಾದಲ್ಲಿ ಪೋಲೀಸ್ ಠಾಣೆಯಲ್ಲಿ £Ãಡುವುದರೊಂದಿಗೆ ಮಾದರಿಯಾಗಬೇಕೆಂದು ತಿಳಿಸಿದರು.

Leave A Reply

Your email address will not be published.