ಹೆಬ್ರಿ : ಮದ್ಯ ಕುಡಿದು ಬಾಟಲಿಯಿಂದ ಎದುರಿದ್ದವನಿಗೆ ಮಾರಣಾಂತಿಕ ಹಲ್ಲೆ ಮಾಡಿದ ಕುಡುಕ !

ಹೆಬ್ರಿ: ಸರಾಯಿ ಕುಡಿದು, ಕ್ಷುಲ್ಲಕ ಕಾರಣಕ್ಕೆ ಮಾತು ಬೆಳೆದು ವ್ಯಕ್ತಿಯೋರ್ವನ ಮೇಲೆ ಸಾರಾಯಿ ಬಾಟಲಿಯಲ್ಲಿ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಡಾರು ಗ್ರಾಮದಲ್ಲಿ ನಿನ್ನೆ ರಾತ್ರಿ ( ಮೇ.1) ರಂದು ನಡೆದಿದೆ.

ಕರುಣಾಕರ ರಾವ್, ರತ್ನಾಕರ ರಾವ್, ರಾಜೇಶ್ ಎಂಬುವವರೊಂದಿಗೆ ಮನೆಯಲ್ಲಿ ಸಾರಾಯಿ ಸೇವಿಸುತ್ತಿದ್ದರು.

ಈ ವೇಳೆ ಕರುಣಾಕರ ರಾವ್ ಬಳಿ ಆರೋಪಿ ರತ್ನಾಕರ ರಾವ್ ಕೆಟ್ಟದಾಗಿ ಮಾತನಾಡಿದ್ದಾನೆ. ಆಗ ನೀನ್ಯಾಕೆ ಕೆಟ್ಟದಾಗಿ ಮಾತನಾಡುತ್ತೀಯಾ ಎಂದು ಪ್ರಶ್ನಿಸಿದಾಗ ರತ್ನಾಕರ ರಾವ್ ಸರಾಯಿ ಬಾಟಲಿ ಒಡೆದು ನೆಲಕ್ಕೆ ಬೀಳಿಸಿ ರತ್ನಾಕರ್ ಮೇಲೆ ಬಾಟಲಿಯಿಂದ ಕುತ್ತಿಗೆ,
ಗಲ್ಲದ ಎಡಭಾಗ, ಎದೆಯ ಎಡಭಾಗ ಹಾಗೂ ಬೆನ್ನಿಗೆ ಹಲ್ಲೆ ಮಾಡಿ ನಿನ್ನನ್ನು ಈಗಲೇ ಕೊಂದು ಹಾಕುತ್ತೇನೆ ಎಂದು ಜೀವಬೆದರಿಕೆ ಹಾಕಿದ್ದರು.

ತಕ್ಷಣ ಸ್ಥಳದಲ್ಲಿದ್ದ ನಯನ ಹಾಗೂ ರಾಜೇಶ್ ಸೇರಿ ಆರೋಪಿಯನ್ನು ತಡೆದು ಬೊಬ್ಬೆ ಹಾಕಿದಾಗ ಆತ ಬಾಟಲಿ ಚೂರನ್ನು ಅಲ್ಲಿಯೇ ಬಿಸಾಡಿ ಓಡಿ ಹೋಗಿದ್ದಾನೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave A Reply

Your email address will not be published.