ಮದುವೆಯಾಗಿ ಬಂದ ಹೊಸ ಸೊಸೆಯಿಂದ ಅತ್ತೆಯ ಅಕ್ರಮ ಸಂಬಂಧ ಬಯಲು|

ಕೊಚ್ಚಿ : ಅತ್ತೆಯ ಅಕ್ರಮ ಸಂಬಂಧವನ್ನು ಬಯಲು ಮಾಡಿದ್ದಕ್ಕೆ ಸೊಸೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆಯೊಂದು ಕೇರಳದ ತ್ರಿಸ್ಸೂರ್ ಜಿಲ್ಲೆಯ ಕೊರಟ್ಟಿಯಲ್ಲಿ ನಡೆದಿದೆ.

ಮಾರಣಾಂತಿಕವಾಗಿ ಹಲ್ಲೆಗೊಳಗಾದವಳು ಪೆರುಂಬವೂರ್ ಮೂಲದ ಎಂ.ಎಸ್.ವೈಷ್ಣವಿ. ವೈಷ್ಣವಿ ಅಂತಿಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ. ಈ ದಾಳಿಯಿಂದ ಗಂಭೀರ ಗಾಯಗೊಂಡಿರುವ ಆಕೆ ಅಂಗಮಲಿಯಲ್ಲಿರುವ ಅಪೊಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕೊರಟ್ಟಿಯ ಪಲಪಲ್ಲಿ ಮೊಝಿಕುಲಂ ನಿವಾಸಿ ಮುಕೇಶ್ ಎಂಬುವವರನ್ನು 6 ತಿಂಗಳ ಹಿಂದೆ ಮದುವೆ ಆಗಿದ್ದಾಳೆ ವೈಷ್ಣವಿ.

ಅತ್ತೆಯ ಪ್ರಿಯಕರ ಮನೆಯಿಂದ ಸುಮಾರು 3 ಕಿ.ಮೀ.ದೂರದಲ್ಲಿ ನೆಲೆಸಿದ್ದಾನೆ. ಒಂದು ದಿನ ಆತ ಮನೆಗೆ ಬಂದಾಗ ಆಕೆ ತಡೆದಿದ್ದಾಳೆ. ಇದೆಲ್ಲಾ ಆದ ನಂತರ ವೈಷ್ಣವಿ ಭಾನುವಾರ ರಾತ್ರಿ ನೆರೆಮನೆಯವರ ಜೊತೆ ಮಾತನಾಡುವಾಗ ಏಕಾಏಕಿ ದಾಳಿ ಮಾಡಿದ ಆರೋಪಿ ವೈಷ್ಣವಿ ಮುಖಕ್ಕೆ ಬಲವಾಗಿ ಹೊಡೆದಿದ್ದಾನೆ. ಈ ವೇಳೆ ಪತ್ನಿಯನ್ನು ರಕ್ಷಿಸಲು ಬಂದ ಪತಿಗೂ ಆರೋಪಿ ಹಲ್ಲೆ ಮಾಡಿದ್ದಾನೆ.

ಆದರೆ ನಂತರ ಆತ ಸಹಾಯಕ್ಕಾಗಿ ನೆರೆಯವರನ್ನು ಕರೆದಾಗ ಆರೋಪಿ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ವೈಷ್ಣವಿಯನ್ನು ಪತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave A Reply

Your email address will not be published.