ಶೇಣಿ: ಇಂದು ವಿಜ್ರಂಭಣೆಯ ಬ್ರಹ್ಮ ಬೈದರ್ಕಳ ನೇಮೋತ್ಸವ

ಸುಳ್ಯ : ಇತಿಹಾಸ ಪ್ರಸಿದ್ಧವಾದ ಶ್ರೀ ಕೋಟಿ ಚೆನ್ನಯ್ಯ ಬ್ರಹ್ಮಬೈದರ್ಕಳ ಗರಡಿ ಶೇಣಿಯಲ್ಲಿ ಫೆ.28ರಂದು ವಿಜ್ರಂಭನೆಯ ಬ್ರಹ್ಮಬೈದರ್ಕಳ ನೇಮೋತ್ಸವ ನಡೆಯಲಿದೆ .

ಪೂರ್ವಾಹ್ನ ಮಹಾಗಣಪತಿ ಹೋಮ ಬೈದ್ಯರುಗಳಿಗೆ ಕಲಶಾಭಿಷೇಕ ,ತಂಬಿಲ ಪ್ರಸನ್ನ ಪೂಜೆ ನಡೆಯಲಿದೆ.

ಸಂಜೆ ಬ್ರಹ್ಮಬೈದರ್ಕಳ ಭಂಡಾರ ತೆಗೆಯುವುದು ನಂತರ ರಾತ್ರಿ ಗಂಟೆ 9.30 ಕ್ಕೆ ಸರಿಯಾಗಿ ಬೈದೇರುಗಳು ಗರಡಿ ಇಳಿಯುವುದು, ನಂತರ ಚೊಕ್ಕಾಡಿ ಶ್ರೀ ಉಳ್ಳಾಕುಲು ಪಾದಕ್ಕೆ ಕಾಣಿಕೆ ಅರ್ಪಿಸುವುದು , ಮಾನಿಬಾಲೆ ಗರಡಿ ಇಳಿಯುವುದು , ಕೋಟಿ ಚೆನ್ನಯರ ದರ್ಶನ ಸೇಟು, ಮುಂಜಾನೆ ಗಂಧ ಪ್ರಸಾದ ವಿತರಣೆ ನಡೆಯಲಿದೆ.

Leave A Reply

Your email address will not be published.