ಬೆಳ್ತಂಗಡಿ : ಯುವಕನೋರ್ವ ಆತ್ಮಹತ್ಯೆ | ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದ ಯುವಕ

ಬೆಳ್ತಂಗಡಿ : 18 ವರ್ಷದ ಯುವಕನೋರ್ವ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಮದ್ದಡ್ಕ ಬೆಳ್ತಂಗಡಿಯಲ್ಲಿ ಇಂದು ನಡೆದಿದ್ದು ಸಂಜೆ ಬೆಳಕಿಗೆ ಬಂದಿದೆ.

ಮೃತ ಯುವಕನನ್ನು ಮಹಮ್ಮದ್ ತಂಜಿ಼ಳ್ ( 18) ಎಂದು ಗುರುತಿಸಲಾಗಿದೆ. ಅಕ್ಕ ಅಮ್ಮನನ್ನು ಕರೆದುಕೊಂಡು ಇಂದು ಬೆಳಗ್ಗೆ ಮಂಗಳೂರಿನ ಆಸ್ಪತ್ರೆಗೆಂದು ಹೊರ ಹೋದ ನಂತರ ಈ ಘಟನೆ ನಡೆದಿದೆ. ಮನೆ ಮಂದಿ ಬೆಳಗ್ಗೆ 11.30ರಿಂದ ಕಾಲ್ ಮಾಡ್ತಾ ಇದ್ದರೂ ರಿಸೀವ್ ಮಾಡಿಲ್ಲವೆಂದು ತಿಳಿದು ಬಂದಿದೆ.

ಕನ್ನಡಿ ಕಟ್ಟೆಯಲ್ಲಿದ್ದ ಮನೆಯನ್ನು ಮಾರಿ, ನಂತರ ಮದ್ದಡ್ಕದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಮೃತ ಯುವಕನ ಅಪ್ಪ ಶಿವಮೊಗ್ಗದಲ್ಲಿ ಕೆಲಸದಲ್ಲಿದ್ದಾರೆ. ಒಟ್ಟಿಗೆ 4 ಜನ ಹೆಣ್ಣು ಮಕ್ಕಳು ಹಾಗೂ 2 ಗಂಡು ಮಕ್ಕಳಲ್ಲಿ ಮಹಮ್ಮದ್ ತಂಜಿ಼ಲ್ ಕೊನೆಯ ಮಗನಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣವೇನೆಂದು ತಿಳಿದು ಬಂದಿಲ್ಲ.

Leave A Reply

Your email address will not be published.