ಕನ್ನಡ ಶಾಲೆಯಲ್ಲಿ ಪ್ರತಿದಿನ ಮಲಿಯಾಳಿ ನಾಡಗೀತೆ| ವಾರಕ್ಕೆ ಒಂದು ದಿನ ಮಾತ್ರ ಕನ್ನಡ ನಾಡಗೀತೆ| ಆಡಳಿತ ಮಂಡಳಿಯ ವಿರುದ್ಧ ಕನ್ನಡಪರ ಸಂಘಟನೆ ಆಕ್ರೋಶ

ಒಂದು ಕಡೆ ಹಿಜಬ್ ಕೇಸರಿ ವಿವಾದ ಇನ್ನೂ ಮುಗಿದಿಲ್ಲ‌. ಇದೀಗ ಶಾಲೆಯಲ್ಲಿ ಕನ್ನಡದ ಬದಲು ಮಲಯಾಳಿ ನಾಡಗೀತೆ ಹಾಡಿಸಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಟಿ ದಾಸರಹಳ್ಳಿ ಸಮೀಪದ ಮಲ್ಲಸಂದ್ರದ ಅಯ್ಯಪ್ಪ ವಿದ್ಯಾಕೇಂದ್ರದಲ್ಲಿ ಈ ಘಟನೆ ನಡೆದಿದೆ. ಈ ಶಾಲೆಯಲ್ಲಿ. ವಾರಕ್ಕೆ ಒಂದು ಬಾರಿ ಮಾತ್ರ ಕನ್ನಡ ನಾಡಗೀತೆ ಹಾಡಿಸಿ, ಉಳಿದ ಎಲ್ಲಾ‌ ದಿನಗಳಲ್ಲಿ ಮಲಿಯಾಳಿ ನಾಡಗೀತೆ ಹಾಡಿಸಲಾಗುತ್ತದೆ.

ಈ ಬಗ್ಗೆ ಕನ್ನಡಪರ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದ್ದು, ಶಾಲೆಯಲ್ಲಿ ಮಕ್ಕಳಿಗೆ ದಿನನಿತ್ಯ ಕನ್ನಡ ಹಾಡು ಹಾಡಿಸಬೇಕೆಂದು ಒತ್ತಾಯ ಮಾಡಿದ್ದಾರೆ. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದಿದ್ದಾರೆ.

Leave A Reply

Your email address will not be published.