ಸುರತ್ಕಲ್ ಟೋಲ್ ಗೇಟ್ ಪ್ರತಿಭಟನೆ : ಮಂಗಳಮುಖಿಯರಿಂದ ಆಸಿಫ್ ಆಪತ್ಭಾಂಧವರ ಮೇಲೆ ಹಲ್ಲೆ ಯತ್ನ

ಸುರತ್ಕಲ್ : ಎನ್ ಐಟಿಕೆ ಬಳಿ ಇರುವ ಟೋಲ್ ಗೇಟ್ ವಿರುದ್ಧ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಆಸಿಫ್ ಅಪತ್ಭಾಂಧವ ಅವರ ಮೇಲೆ ಮಂಗಳಮುಖಿಯರು ಹಲ್ಲೆ ಮಾಡಿದ್ದಾರೆ.

ಕಳೆದ ಮಧ್ಯರಾತ್ರಿ ಸುಮಾರು 12.30 ರ ಸುಮಾರಿಗೆ ಇಬ್ಬರು ಮಂಗಳಮುಖಿಯರು ಬಂದಿದ್ದಾರೆ. ಅನಂತರ ಮಂಗಳಮುಖಿಯರ ತಂಡ ಬಂದಿದೆ. ಪ್ರತಿಭಟನಾ ನಿರತ ಆಸಿಫ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಕೂಡಾ ಯತ್ನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಈ ಸಂದರ್ಭದಲ್ಲಿ ಆಸಿಫ್ ಅವರು ಕೂಡಲೇ ಫೇಸ್ಬುಕ್ ಲೈವ್ ಬಂದಿದ್ದಾರೆ. ತಂಡದಲ್ಲಿದ್ದ ಮಂಗಳಮುಖಿಯರು ಬಟ್ಟೆ ಎತ್ತಿ ನರ್ತನ ಮಾಡಿದ್ದಾರೆ. ಅಷ್ಟರಲ್ಲಿ ಪೊಲೀಸರು ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಈ ಪ್ರತಿಭಟನಾ ವೇದಿಕೆಯನ್ನು ನಾಳೆಯೇ ಒಡೆದು ಹಾಕುತ್ತೇವೆ. ನಿನ್ನನ್ನು ಇಲ್ಲಿಂದ ಓಡಿಸುತ್ತೇವೆ. ನಾಳೆ ಸುರತ್ಕಲ್ ಪೊಲೀಸ್ ಸ್ಟೇಷನ್ ನಲ್ಲಿ ನಿನ್ನನ್ನು ಕೂರಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಮಂಗಳಮುಖಿಯರ ತಂಡ ಎಂದು ಆಸಿಫ್ ದೂರಿದ್ದಾರೆ.

Leave A Reply

Your email address will not be published.