ಜನವಸತಿ ಪ್ರದೇಶಕ್ಕೆ ನುಗ್ಗಿದ ಕಾಡಾನೆ!! ಆನೆಯ ತುಳಿತಕ್ಕೆ ಸಿಕ್ಕಿ ಐದು ವರ್ಷದ ಬಾಲಕಿ ಸಾವು-ಓರ್ವ ಗಂಭೀರ

ಕೇರಳ:ವಸತಿ ಪ್ರದೇಶಕ್ಕೆ ನುಗ್ಗಿದ ಕಾಡಾನೆಯೊಂದು ಐದು ವರ್ಷದ ಬಾಲಕಿಯನ್ನು ತುಳಿದುಕೊಂದ ಘಟನೆ ತ್ರಿಶೂರ್ ನ ಪುತನ್ ಚಿರಾ ಎಂಬಲ್ಲಿ ನಡೆದಿದೆ.ಮೃತ ಬಾಲಕಿಯನ್ನು ಅಗ್ನಿಮಿಯಾ ಎಂದು ಗುರುತಿಸಲಾಗಿದೆ.

ಜನವಸತಿ ಪ್ರದೇಶಕ್ಕೆ ರಾತ್ರಿ ವೇಳೆ ಕಾಡನೇ ನುಗ್ಗಿದ್ದು,ಈ ವೇಳೆ ಮೃತ ಬಾಲಕಿಯ ಮನೆ ಮಂದಿಯೆಲ್ಲಾ ಪ್ರಾಣ ಉಳಿಸಿಕೊಳ್ಳಲು ಓಡಿದ್ದು,ಬಾಲಕಿಯ ತಂದೆ ಅದೆಷ್ಟೇ ಪ್ರಯತ್ನ ಪಟ್ಟರೂ ರಕ್ಷಿಸಲು ಆಗಲಿಲ್ಲ.ನತದೃಷ್ಟ ಬಾಲಕಿ ಆನೆಯ ಕಾಲಿನಡಿಗೆ ಸಿಕ್ಕಿ ಅಪ್ಪಚ್ಚಿಯಾಗಿದ್ದಾಳೆ.

ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave A Reply

Your email address will not be published.