ಮಾಜಿ ಎಂ.ಪಿ ಶಿವರಾಮೇ ಗೌಡರಿಗೆ ಜೆ.ಡಿ.ಎಸ್ ಪಕ್ಷದಿಂದ ಗೇಟ್ ಪಾಸ್!! ವರಿಷ್ಠರ ಸೂಚನೆಯಂತೆ ಗೌಡರನ್ನು ಉಚ್ಚಾಟಿಸಿ ಆದೇಶಿಸಿದ ರಾಜ್ಯಾಧ್ಯಕ್ಷ

ಮಂಡ್ಯ: ಜಿಲ್ಲೆಯ ಹಿರಿಯ ರಾಜಕಾರಣಿ, ಎಲ್ಲೂ ರಾಜಿಮಾಡಿಕೊಳ್ಳದ ಹೋರಾಟಗಾರರಾದ ದಿವಂಗತ ಜಿ.ಮಾದೇಗೌಡರ ಬಗ್ಗೆ ಅವಹೇಳನಕಾರಿಯಾದ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದ ಲೋಕಸಭಾ ಮಾಜಿ ಸದಸ್ಯ, ಜೆ.ಡಿ.ಎಸ್ ನಾಯಕ ಎಲ್ ಆರ್ ಶಿವರಾಮೇ ಗೌಡರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಿ ರಾಜ್ಯ ಪ್ರಮುಖ ಹೆಚ್.ಕೆ. ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡುವಂತೆ ಜೆ.ಡಿ.ಎಸ್ ವರಿಷ್ಠ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸೂಚನೆಯ ಮೇರೆಗೆ ಈ ಆದೇಶ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಎಂ.ಪಿ ಚುನಾವಣೆಗೆ ಮೂವತ್ತು ಕೋಟಿ ಹಣ ಖರ್ಚು ಮಾಡಿದ್ದೇನೆ ಎಂಬ ಫೋನ್ ಕಾಲ್ ರೆಕಾರ್ಡ್ ಹಾಗೂ ಮಾದೇಗೌಡರನ್ನು ಅವಹೇಳನ ನಡೆಸಿದ ಶಿವರಾಮೇ ಗೌಡರ ಆಡಿಯೋ ಸಾಮಾಜಿಕ ಭಾರೀ ವೈರಲ್ ಆಗಿತ್ತು.

Leave A Reply

Your email address will not be published.