ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಗಮನಸೆಳೆಯಲಿದೆ ಕರ್ನಾಟಕದ ಸ್ತಬ್ದಚಿತ್ರ!! ‘ ಪಾರಂಪರಿಕ ಕರಕುಶಲ ತೊಟ್ಟಿಲಿಗೆ’ ಸಂತಸ ವ್ಯಕ್ತಪಡಿಸಿದ ಬೊಮ್ಮಾಯಿ

ಈ ಬಾರಿಯ ಗಣರಾಜ್ಯೋತ್ಸವಕ್ಕೆ 12 ರಾಜ್ಯಗಳ ಪೈಕಿ ಕರ್ನಾಟಕದಿಂದ ಏಕೈಕ ಸ್ತಬ್ದಚಿತ್ರವೊಂದು ಆಯ್ಕೆಯಾಗಿದ್ದು, ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಪಾರಂಪರಿಕ ಕರಕುಶಲ ತೊಟ್ಟಿಲು ಎಂಬ ವಿಷಯವನ್ನು ಆಧಾರಿತ ಸ್ತಬ್ದಚಿತ್ರ ಇದಾಗಿದ್ದು,ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಗಮನಸೆಳೆಯಲಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಮ್ಮ ಹೆಮ್ಮೆಯ ರಾಜ್ಯದ ಪಾರಂಪರಿಕ ಕರಕುಶಲ ತೊಟ್ಟಿಲು ಸ್ತಬ್ದಚಿತ್ರ ಗಣರಾಜ್ಯೋತ್ಸವಕ್ಕೆ ಆಯ್ಕೆ ಆಗಿರುವುದು, ಅಲ್ಲದೇ 13 ನೇ ಬಾರಿ ರಾಜ್ಯದ ಸ್ತಬ್ದಚಿತ್ರಕ್ಕೆ ಮನ್ನಣೆ ದಕ್ಕಿರುವುದು ಸಂತಸ ತಂದಿದೆ ಎಂದಿದ್ದಾರೆ.

Leave A Reply

Your email address will not be published.