ಬೆಳ್ತಂಗಡಿ:ಪ್ರಯಾಣಿಕರನ್ನು ಹೊತ್ತು ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಬೆಂಕಿಗಾಹುತಿ !! ಪ್ರಯಾಣಿಕರು ಅಪಾಯದಿಂದ ಪಾರು- ಬಸ್ ಸಂಪೂರ್ಣ ಸುಟ್ಟು ಭಸ್ಮ

ಬೆಳ್ತಂಗಡಿ: ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ನಿಡ್ಲೆ ಸಮೀಪ ನಡೆದಿದೆ.ಅದೃಷ್ಟವಾಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಪ್ರಯಾಣಿಕರನ್ನು ಹೊತ್ತು ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಬಸ್, ನಿಡ್ಲೆ ಸಮೀಪಸುತ್ತಿದ್ದ ವೇಳೆ ನಿಡ್ಲೆ ಅನುಗ್ರಹ ಆಯಿಲ್ ಮಿಲ್ ಸಮೀಪ ಈ ದುರ್ಗಟನೆ ನಡೆದಿದ್ದು, ಅಪಾಯ ಅರಿತ ಪ್ರಯಾಣಿಕರು ಬಸ್ ನಿಂದ ಹೊರಗೆ ಓಡಿ ತಮ್ಮ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಸ್ ನ ಕೆಲ ಭಾಗಗಳು ಮಾತ್ರ ಸುಟ್ಟು ಕರಕಲಾಗಿದ್ದು, ಸಂಪೂರ್ಣ ಸುಟ್ಟು ಭಸ್ಮ ಎಂಬ ಶಿರೋನಾಮ ಕ್ಕೆ ವಿಷಾದಿಸುತ್ತೇವೆ.

Leave A Reply

Your email address will not be published.