ಧರ್ಮಸ್ಥಳ | ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆಗೆ ಶರಣು

Share the Article

ಧರ್ಮಸ್ಥಳದ ಮುಂಡ್ರುಪ್ಪಾಡಿಯ ಮಹಿಳೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.

ಮುಂಡ್ರುಪ್ಪಾಡಿಯ ಕೂಟದ ಕಲ್ಲು ಬಾಡಿಗೆ ಮನೆ ನಿವಾಸಿ ಮೋಹನ ಎಂಬವರ ಪತ್ನಿ ಸೌಮ್ಯ (29) ಮೃತ ದುರ್ದೈವಿ. ಇವರು
ಗುರುವಾರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ವೇಳೆ
ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೌಮ್ಯ ಅವರಿಗೆ ಇದು ಎರಡನೇ ಮದುವೆ. ಅದಲ್ಲದೆ ಆಕೆ ಮಾನಸಿಕ ಅಸ್ವಸ್ಥರಾಗಿದ್ದರು ಎಂದು ಹೇಳಲಾಗಿದೆ. ಮೃತರು ಪತಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.