ಶೂ ಧರಿಸಿಕೊಂಡೇ ಚಾಮುಂಡೇಶ್ವರಿ ದೇವಳದ ಒಳಗೆ ಹೋದ ಪೋಲಿಸ್ !!

ಮೈಸೂರು: ದೇವಸ್ಥಾನದ ಒಳಗೆ ಯಾವ ಒಬ್ಬ ವ್ಯಕ್ತಿಯೇ ಆಗಲಿ ಶಿಸ್ತಿನಿಂದ ಭಕ್ತಿಯಿಂದ ಪ್ರವೇಶಿಸುವುದು ಒಳಿತು.ದೇವರಿಗೆ ಮೇಲು-ಕೀಳು ಎಂಬ ಭೇದ-ಭಾವವಿಲ್ಲ. ಅದೇ ರೀತಿ ಪ್ರತಿಯೊಬ್ಬರಿಗೂ ಒಂದೇ ನಿಯಮವಾಗಿರುತ್ತದೆ.

ಮೈಸೂರು ದಸರಾ ಉದ್ಘಾಟನೆಯ ವೇಳೆ ಮುಖ್ಯಮಂತ್ರಿ ಬಂದೂಬಸ್ತ್ ಅಲ್ಲಿದ್ದ ಎಸ್ ಪಿ ಒಬ್ಬರು ಶೂ ಧರಿಸಿ ಚಾಮುಂಡೇಶ್ವರಿ ದೇಗುಲ ಪ್ರವೇಶಿಸಿ ಅಶಿಸ್ತಿನಿ ವರ್ತನೆ ತೋರ್ಪಡಿಸಿದ ಘಟನೆ ನಡೆದಿದೆ.

ಎಸ್ ಪಿ ಆರ್. ಚೇತನ್ ಅವರು ಶೂ ಧರಿಸಿ ಚಾಮುಂಡೇಶ್ವರಿ ದೇಗುಲ ಪ್ರವೇಶ ಮಾಡಿದರು. ಎಸ್ಪಿ ಚೇತನ್ ಒಳಗೆ ಹೋಗುತ್ತಿದ್ದಂತೆ ಹಿಂದೆ ಹೋದ ಪೊಲೀಸ್ ಸಿಬ್ಬಂದಿ, ‘ಸಾರ್ ಶೂ ಶೂ’ ಎಂದು ಕೂಗಿದರು. ಪೊಲೀಸ್ ಸಿಬ್ಬಂದಿ ಕೂಗಿಕೊಳ್ಳುತ್ತಿದ್ದಂತೆ ಹೊರಬಂದು ಶೂ ಬಿಚ್ಚಿ ನಂತರ ಒಳ ನಡೆದರು.

Leave A Reply

Your email address will not be published.