ಲವ್ ಜಿಹಾದ್ ಹಾಗೂ ನಾರ್ಕೋಟಿಕ್ ಜಿಹಾದ್ ಮೂಲಕ ಯುವಕರನ್ನು ಹಾಳು ಮಾಡಲಾಗುತ್ತಿದೆ | ಕೇರಳದ ಬಿಶಪ್ ಪಾಲಾ ಜೋಸೆಫ್ ಹೇಳಿಕೆ | ಬಿಷಪ್ ಅವರದು ವಿಕೃತ ಚಿಂತನೆ ಎಂದ ಪಿ.ಚಿದಂಬರಂ !

ಕೊಚ್ಚಿನ್: ನಾರ್ಕೊಟಿಕ್ ಜಿಹಾದ್ ಬಗ್ಗೆ ಕೇರಳದಲ್ಲಿನ ಕ್ಯಾಥೋಲಿಕ್ ಬಿಷಪ್ ಜೋಸೆಫ್ ಕಲ್ಲರಂಗತ್ ಅವರ ಹೇಳಿಕೆಗೆ ಮಾಜಿ ಕೇಂದ್ರ ಸಚಿವಕ್ ಚಿದಂಬರಂ ಆಕ್ಷೇಪ ವ್ಯಕ್ತಪಡಿಸಿ ಹೇಳಿಕೆ ನೀಡಿರುವುದು ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಲವ್ ಜಿಹಾದ್ ಹಾಗೂ ನಾರ್ಕೋಟಿಕ್ ಜಿಹಾದ್ ಮೂಲಕ ಯುವಕರನ್ನು ಹಾಳು ಮಾಡಲಾಗುತ್ತಿದೆ. ಶಸ್ತ್ರಾಸ್ತ್ರಗಳನ್ನು ನುಗ್ಗಿಸಲು ಆಗದ ಪ್ರದೇಶಗಳಲ್ಲಿ ತೀವ್ರಗಾಮಿಗಳು ಲವ್ ಜಿಹಾದ್ ಹಾಗೂ ನಾರ್ಕೋಟಿಕ್ ಜಿಹಾದ್ ಗಳ ಮೂಲಕ ಯುವಜನತೆಯನ್ನು ಹಾಳುಗೆಡವುತ್ತಿದ್ದಾರೆ ಎಂದು ಪಾಲ ಬಿಷಪ್ ಜೋಸೆಫ್ ಕಲ್ಲರಂಗತ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆ ಮೂಲಕ ಲವ್ ಜಿಹಾದಿಗೆ ಹಿಂದುಗಳಲ್ಲದ ಕ್ರಿಶ್ಚಿಯನ್ ಹುಡುಗಿಯರನ್ನು ಕೂಡ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂದು ಬಿಶಪ್ ಅವರು ಅಭಿಪ್ರಾಯಪಟ್ಟಿದ್ದರು. ಬಿಶಪ್ ಅವರ ಹೇಳಿಕೆಯನ್ನು ಮುಸ್ಲಿಂ ಸಂಘಟನೆಗಳು ವಾಪಸ್ಸು ಪಡೆಯಬೇಕು ಎಂದು ಕೋರಿದ್ದರು. ಆದರೆ ಬಿಷಪ್ ಅವರಿಗೆ ಕೇರಳದ ಕ್ರಿಶ್ಚಿಯನ್ ಇಡೀ ಸಮೂಹ ಬೆಂಬಲವಾಗಿ ನಿಂತಿತ್ತು. ಕಾರಣ ಲವ್ ಜಿಹಾದಿ ನಿಂದ ಎಷ್ಟು ಕೃಷಿಯನ್ನು ಹುಡುಗಿಯರು ಮನೆ ಬಿಟ್ಟು ಹೋಗಿ ಜೀವನ ಹಾಳು ಮಾಡಿಕೊಂಡಿದ್ದರು.

ಕಲ್ಲರಂಗತ್ ಅವರ ಈ ಹೇಳೆಕೆ ಆರಂಭದಲ್ಲಿ ಕೇರಳದ ಕಾಂಗ್ರೆಸ್ ನಾಯಕರು, ವಿಪಕ್ಷ ನಾಯಕ ವಿ.ಡಿ ಸತೀಶನ್ ಅವರಿಂದಲೂ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಈಗ ಮಾಜಿ ಕೇಂದ್ರ ಸಚಿವ ಚಿದಂಬರಂ ಅವರೂ ಬಿಷಪ್ ಅವರ ಆರೋಪವನ್ನು “ವಿಕೃತ ಚಿಂತನೆ”ಯೆಂದು ಟೀಕಿಸಿದ ನಂತರ ಕೆಪಿಸಿಸಿ ಮಾಜಿ ಕೇಂದ್ರ ಸಚಿವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.

ಬಿಷಪ್ ಅವರ ಹೇಳಿಕೆಗೆ ಲೇಖನದ ಮೂಲಕ ಪ್ರತಿಕ್ರಿಯೆ ನೀಡಿರುವ ಚಿದಂಬರಂ, ಪಾಲಾ ಬಿಷಪ್ ಅವರ ಹೇಳಿಕೆ, ಅವರ ವಿಕೃತ ಚಿಂತನೆಯನ್ನು ಹಾಗೂ ಧರ್ಮಗಳ ನಡುವೆ ಅಪನಂಬಿಕೆ ಉತ್ತೇಜಿಸುವ, ಕೋಮು ಸಮರವನ್ನುಂಟುಮಾಡುವ ಉದ್ದೇಶದ್ದಾಗಿದೆ” ಎಂದು ಹೇಳಿದ್ದರು.
ಕೇರಳದಲ್ಲಿ ಕ್ಯಾಥೀಲಿಕ್ ಸಮುದಾಯದಿಂದ ಕಾಂಗ್ರೆಸ್ ಗೆ ಬಹುಪಾಲು ಬೆಂಬಲ ದೊರೆಯುತ್ತಿತ್ತು. ಬಿಷಪ್ ಅವರ ಮಾತನ್ನು ವಿಕೃತ ಚಿಂತನೆ ಎಂದದ್ದು ಬಹುಪಾಲು ಕ್ರಿಶ್ಚಿಯನ್ನರನ್ನು ಕೆರಳಿಸಿದೆ.

ಲವ್ ಜಿಹಾದ್ ಎಂಬುದು ಹಿಂದೂ ತೀವ್ರಗಾಮಿ ಬಲಪಂಥೀಯರು ಯುವಕ/ಯುವತಿಯರನ್ನು ತೀವ್ರಗಾಮಿಗಳನ್ನಾಗಿಸುವುದಕ್ಕೆ ಸೃಷ್ಟಿಸಿರುವ ಒಂದು ಭೂತ ಎಂದು ಚಿದಂಬರಂ ಆರೋಪಿಸಿದ್ದಾರೆ.
ಜಾತ್ಯತೀತ ರಾಷ್ಟ್ರ ಇಂತಹ ಮತಾಂಧತೆಯನ್ನು ಮೆಟ್ಟಿ ನಿಲ್ಲಬೇಕು ಎಂದು ಚಿದಂಬರಂ ಹೇಳಿದ್ದಾರೆ.
ಅಷ್ಟೇ ಅಲ್ಲದೇ ದೀಕ್ಷೆ ಪಡೆದಿರುವ ಬಿಷಪ್ ಜೋಸೆಫ್ ಅವರು ಈ ರೀತಿ ಮಾತನಾಡಿರುವುದು ನನಗೆ ಹಾಗೂ ನನ್ನಂತಹ ಅನೇಕ ಲಕ್ಷಾಂತರ ಮಂದಿಗೆ ನೋವುಂಟುಮಾಡಿದೆ. ಭಾರತದಲ್ಲಿ ಇಸ್ಲಾಮ್ ವಿಸ್ತರಣಾವಾದಿತ್ವವಾಗಿದೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ.  ಇಸ್ಲಾಮ್ ಗೆ ಸಾಮೂಹಿಕ ಮತಾಂತರಗೊಳ್ಳುತ್ತಿರುವುದೂ ಸುಳ್ಳು ಎಂದು ಚಿದಂಬರಮ್ ತಮ್ಮ ವಾದ ಸಮರ್ಥಿಸಿಕೊಂಡಿದ್ದಾರೆ.

Leave A Reply

Your email address will not be published.