ಕಡಬ | ತಾಮ್ರದ ಪಾತ್ರೆಗಳನ್ನು ಹೊಳಪು ಮಾಡುವ ನೆಪದಲ್ಲಿ ವಂಚನೆ | ಅಪರಿಚಿತ ವ್ಯಕ್ತಿಯ ಸುಳಿವು ನೀಡಲು ಕಡಬ ಎಸ್ಐ ಸೂಚನೆ

ತಾಮ್ರದ ಪಾತ್ರೆಯನ್ನು ಹೊಳಪು ಮಾಡಿ ಕೊಡುತ್ತೇನೆಂದು ಸಾರ್ವಜನಿಕರನ್ನು ವಂಚಿಸುತ್ತಿರುವ ಘಟನೆ ಕಡಬದಲ್ಲಿ ವರದಿಯಾಗಿದೆ.

ಅಪರಿಚಿತ ವ್ಯಕ್ತಿಯೋರ್ವ ಕೋಡಿಂಬಾಳ ಪರಿಸರದಲ್ಲಿ ತಾಮ್ರದ ಪಾತ್ರೆಗಳನ್ನು ಹೊಳಪು ಮಾಡಿಕೊಡುತ್ತೇನೆಂದು ಮನೆಮನೆಗೆ ತೆರಳುತ್ತಿರುವ ಮಾಹಿತಿ ಬಂದಿದ್ದು, ಸದ್ರಿ ವ್ಯಕ್ತಿ ಯಾರಿಗಾದರೂ ಕಾಣ ಸಿಕ್ಕಿದಲ್ಲಿ ಕೂಡಲೇ ಕಡಬ ಠಾಣೆಗೆ ಮಾಹಿತಿ ನೀಡುವಂತೆ ಎಸ್ಐ ರುಕ್ಕನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.