ಕುಮ್ಕಿ ,ಬಿ.ಖರಾಬ್ ಜಾಗ ಸಕ್ರಮ ಮಾಡಿಸಿಕೊಳ್ಳಲು ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು : ಖಾಸಗಿ ಜಮೀನುಗಳಲ್ಲಿ ಕಂದಾಯ ಇಲಾಖೆಯ ಸರಕಾರಿ ಬಿ ಖರಾಬ್ /ಕುಮ್ಕಿ/ 2 ಬಾಣೆ ಜಾಗ ಇದ್ದರೆ ಹಣ ಪಾವತಿಸಿ ಸಕ್ರಮ ಮಾಡಿಸಿಕೊಳ್ಳಲು ಸಚಿವ ಸಂಪುಟ ಸಮ್ಮತಿಸಿದೆ.

ಬಿ ಖರಾಬ್/ಕುಮ್ಮಿ/ ಬಾಣೆ ಜಾಗವನ್ನು ಅನುಭೋಗದಾರರಿಂದ ಮಾರ್ಗಸೂಚಿ ದರದ ನಾಲ್ಕು ಪಟ್ಟು ಪಾವತಿ ಪಡೆದು ಮಂಜೂರು ಮಾಡಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಖಾಸಗಿ ಜಮೀನುಗಳ ನಡುವೆ ಇರುವ ಈ ಸರಕಾರಿ ಜಾಗವನ್ನು ಆಯಾ ಮಾಲಕರೇ ಅನುಭವಿಸುತ್ತಿದ್ದಾರೆ. ಕೆಲವೆಡೆ ಅದಕ್ಕೂ ಎ ಖಾತೆ ಮಾಡಿಕೊಡುವಂತೆ ಬೇಡಿಕೆ ಇದೆ. ಹೀಗಾಗಿ ಸರಕಾರವೇ ಮಂಜೂರು ಮಾಡಿಕೊಡಲು ತೀರ್ಮಾನಿಸಿದೆ ಎಂದು ಸಚಿವ ಮಾಧುಸ್ವಾಮಿ ಸದನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Leave A Reply

Your email address will not be published.