ಭಾರತವನ್ನು ಹೊಗಳಿ, ಪಾಕಿಸ್ತಾನಕ್ಕೆ ಛೀಮಾರಿ ಹಾಕಿದ ಅಫ್ಘಾನ್ ಪಾಪ್ ಸ್ಟಾರ್ | ತಾಲಿಬಾನ್ ಸಬಲೀಕರಣದ ಹಿಂದೆ ಇರುವುದೇ ಪಾಕಿಸ್ತಾನ ಎಂದ ಆರ್ಯಾನ ಸಯೀದ್ !!

ಅಫ್ಘಾನಿಸ್ತಾನ ಈಗ ತಾಲಿಬಾನಿಗಳು ಕಪಿಮುಷ್ಟಿಯಲ್ಲಿದೆ. ಈ ಕುರಿತಾಗಿ ಹೇಳಿಕೆ ನೀಡಿರುವ ಅಫ್ಘಾನ್ ಖ್ಯಾತ ಪಾಪ್ ಸ್ಟಾರ್ ಆರ್ಯಾನ ಸಯೀದ್ ಅವರು, ಭಾರತ ನೀಡುತ್ತಿರುವ ಸಹಾಯವನ್ನು ನೆನೆದು ಕೃತಜ್ಞತೆ ಸಲ್ಲಿಸುತ್ತೇನೆ. ಆದರೆ ಪಾಕಿಸ್ತಾನ ತಾಲಿಬಾನ್ ಗೆ ಬೆಂಬಲ ನೀಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಎನ್ಎಎನ್‌ಐಗೆ ಸಂದರ್ಶನದಲ್ಲಿ ಆರ್ಯಾನ ಸಯೀದ್ ತನ್ನ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಹಾಗೆಯೇ ಭಾರತ ಮಾಡಿದ ಸಹಾಯವನ್ನು ಹೊಗಳಿದ್ದು, ಪಾಕಿಸ್ತಾನವನ್ನು ತೆಗಳಿದ್ದಾರೆ.

ತಾಲಿಬಾನಿ ಉಗ್ರರು ಅಫ್ಘಾನ್ ರಾಜಧಾನಿ ಕಾಬುಲ್ ವಶಪಡಿಸಿಕೊಂಡ ಬೆನ್ನಲ್ಲೇ ಆರ್ಯಾನ ಸಯೀದ್ ಅಫ್ಘಾನಿಸ್ತಾವನ್ನು ತೊರೆದಿದ್ದಾರೆ. ನಾನು ಖಡಾಖಂಡಿತವಾಗಿ ಪಾಕಿಸ್ತಾನವನ್ನು ದೂಷಿಸುತ್ತೇನೆ. ಹಲವು ವರ್ಷಗಳವರೆಗೆ ನಾನು ನೋಡಿಕೊಂಡು ಬಂದಿದ್ದೇವೆ. ಅನೇಕ ಸಾಕ್ಷಿಗಳನ್ನು ಸಹ ನೋಡಿದ್ದೇನೆ. ತಾಲಿಬಾನ್ ಸಬಲೀಕರಣದ ಹಿಂದೆ ಪಾಕಿಸ್ತಾನ ಇದೆ ಎಂದು ಗುಡುಗಿದ್ದಾರೆ.

ಪ್ರತಿ ಬಾರಿಯೂ ನಮ್ಮ ಸರ್ಕಾರ ತಾಲಿಬಾನ್ ವಿರುದ್ಧ ನಿಂತಾಗ ಅವರು ಪಾಕಿಸ್ತಾನದ ಬೆಂಬಲವನ್ನು ನೋಡುತ್ತಾರೆ. ಹಾಗಾಗಿ ನಾನು ಅವರನ್ನು ದೂಷಿಸುತ್ತೇನೆ. ಪಾಕ್ ಹಿಂದೆ ಸರಿಯುವ ಮತ್ತು ಅಫ್ಘಾನಿಸ್ತಾನ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನಾನು ಭಾವಿಸಿದ್ದೇನೆಂದು ಆರ್ಯಾನ ಎನ್ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು. ಆದರೆ, ತಾವು ಇರುವ ಸ್ಥಳದ ಮಾಹಿತಿಯನ್ನು ತಿಳಿಸಲು ಆರ್ಯಾನ ಇಚ್ಚಿಸಲಿಲ್ಲ.

ತಾಲಿಬಾನ್ ಉಗ್ರರಿಗೆ ಸೂಚನೆ ನೀಡುತ್ತಿರುವುದು ಸಹ ಪಾಕಿಸ್ತಾನ ಸರ್ಕಾರವೇ ಮತ್ತು ಅವರಿಗೆ ತರಬೇತಿಯನ್ನು ಸಹ ನೀಡುತ್ತಿದ್ದಾರೆ. ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯವು ಅವರಿಗೆ ನೀಡುವ ಹಣಕಾಸಿನ ನೆರವನ್ನು ಕಡಿತಗೊಳಿಸುತ್ತದೆ ಎಂಬ ಭರವಸೆ ಇದೆ. ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಹಣದ ನೆರವು ನೀಡಬೇಡಿ, ಅದನ್ನು ಉಗ್ರರ ತರಬೇತಿಗೆ ಬಳಸಿಕೊಳ್ಳುತ್ತಿದ್ದಾರೆಂದು ಹೇಳಿದರು.

ಅಫ್ಘಾನಿಸ್ತಾನದಲ್ಲಿ ಮತ್ತೆ ಶಾಂತಿಯನ್ನು ಮರುಸ್ಥಾಪಿಸಲು ಅಂತಾರಾಷ್ಟ್ರೀಯ ಸಮುದಾಯ ಒಟ್ಟಿಗೆ ಕುಳಿತು ಮಾತಕತೆಯ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಆರ್ಯಾನ ಆಗ್ರಹಿಸಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯವು ಪಾಕಿಸ್ತಾನದ ಮೇಲೆ ಒತ್ತಡ ಹಾಕುತ್ತದೆ ಎಂಬ ಭರವಸೆ ಇದೆ. ಪಾಕಿಸ್ತಾನದಿಂದಾಗಿಯೇ ಅಫ್ಘಾನ್ ನೆಲದಲ್ಲಿ ನಾವು ಈ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ನನಗನಿಸಿದೆ ಎಂದು ತಿಳಿಸಿದರು.

ಹಾಗೆಯೇ ಭಾರತದ ಬಗ್ಗೆ ಮೆಚ್ಚುಗೆ ಮಾತಗಳನ್ನಾಡಿದ ಆರ್ಯಾನ್, ಭಾರತ ಯಾವಾಗಲೂ ನಮ್ಮ ಒಳ್ಳೆಯ ಸ್ನೇಹಿತ. ನಮ್ಮ ಜನರ ಮೇಲೆ ಭಾರತ ದಯೆ ತೋರುತ್ತಿದ್ದರು. ಅವರು ಸಹಾಯ ಮನೋಭಾವದವರು. ಆಫ್ಘಾನ್ ನಿರಾಶ್ರಿತರು ಕೂಡ ಭಾರತ ಬಗ್ಗೆ ಯಾವಾಗಲೂ ಮೆಚ್ಚುಗೆಯ ಮಾತಗಳನ್ನಾಡುತ್ತಿದ್ದರು. ನಾವು ಯಾವಾಗಲೂ ಭಾರತಕ್ಕೆ ಕೃತಜ್ಞರಾಗಿರುತ್ತೇವೆ. ಅಫ್ಘಾನಿಸ್ತಾನದ ಪರವಾಗಿ, ನಾನು ಭಾರತಕ್ಕೆ ನನ್ನ ಅತ್ಯಂತ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಹಲವು ವರ್ಷಗಳಿಂದ ನಾವು ನಮ್ಮ ನೆರೆಹೊರೆಯಲ್ಲಿರುವ ಏಕೈಕ ಉತ್ತಮ ಸ್ನೇಹಿತ ಭಾರತ ಎಂದು ಅರಿತುಕೊಂಡೆವು ಎಂದು ಅವರು ಹೇಳಿದರು.

2015ರಲ್ಲಿ ಆರ್ಯಾನ ಸಯೀದ್ ಅವರು ತಾಲಿಬಾನ್ ಜಾರಿಗೆ ಮಾಡಬೇಕೆಂದಿರುವ ಮೂರು ನಿಷೇಧಗಳನ್ನು ಮುರಿದರು. ಓರ್ವ ಮಹಿಳೆಯಾಗಿ ಕ್ರೀಡಾಂಗಣಕ್ಕೆ ಪ್ರವೇಶಿಸಿದ್ದು, ಹಾಡಿದ್ದು, ಮತ್ತು ಹಿಜಾಬ್ ಧರಿಸದೇ ಕಾರ್ಯಕ್ರಮ ನೀಡಿದ್ದು. ಆದರೆ, ಈ ನಿಯಮಗಳನ್ನು ತಾಲಿಬಾನ್ ಅಡಿಯಲ್ಲಿ ಪಾಲಿಸಬೇಕಿದೆ.

Leave A Reply

Your email address will not be published.