ಸುಪ್ರಸಿದ್ಧ ದೈವ ಕ್ಷೇತ್ರ ಪಣೋಲಿ ಬೈಲಿನಲ್ಲಿ ಆಗಸ್ಟ್ 1 ರಿಂದ ಅಗೇಲು ಸೇವೆ ಆರಂಭ !

ಬಂಟ್ವಾಳ : ಕೊರೊನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಪ್ರಸಿದ್ದ ದೈವ ಕ್ಷೇತ್ರ ಶ್ರೀಕ್ಷೇತ್ರ ಪಣೋಲಿಬೈಲಿನಲ್ಲಿ ಅಗೇಲು ಸೇವೆ ಮತ್ತೆ ಶುರುವಾಗಲಿದೆ. ಇದೀಗ ಮತ್ತೆ ಅಗೇಲು ಸೇವೆಯನ್ನು ಆರಂಭಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.

ಅದರಂತೆ ಆಗಸ್ಟ್ 1 ರಿಂದ, ವಾರದ ಮೂರು ದಿನ -ಮಂಗಳವಾರ, ಶುಕ್ರವಾರ, ಆದಿತ್ಯವಾರದಂದು ಅಗೇಲು ಸೇವೆಯನ್ನು ಹಿಂದಿನಂತೆಯೇ ನಡೆಸಲು ನಿರ್ಧರಿಸಲಾಗಿದೆ.

ಆದರೆ, ಅಗೇಲು ಸೇವೆಗೆ ಬರುವ ಭಕ್ತಾದಿಗಳು ಕೋವಿಡ್ ನಿಯಮಗಳನ್ನು ಪಾಲಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.

Leave A Reply

Your email address will not be published.