ನಟ ಜಗ್ಗೇಶ್ ಪುತ್ರ ಗುರು ರಾಜ್ ಕಾರು ಅಪಘಾತ

ಬೆಂಗಳೂರು : ನವರಸ ನಾಯಕ ಜಗ್ಗೇಶ್ ಅವರ ಪುತ್ರ
ಗುರು ರಾಜ್ ಅವರ ಕಾರು ಭೀಕರ ಅಪಘಾತವಾಗಿದೆ.

ಚಿಕ್ಕ ಬಳ್ಳಾಪುರದ ಅಗಲಗುರ್ಕಿ ಬಳಿ ಈ ಅವಘಡ ನಡೆದಿದೆ. ಅಲ್ಲಿನ ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಜಗ್ಗೇಶ್ ಪುತ್ರ ಗುರು ರಾಜ್ ಅವರ ಕಾರು ಮರಕ್ಕೆ ಡಿಕ್ಕಿ
ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ
ಸಂಪೂರ್ಣ ನಜ್ಜುಗುಜ್ಜು ಆಗಿದೆ. ಮೊದಲಿಗೆ ವೇಗವಾಗಿ ಬರುತ್ತಿದ್ದ ಕಾರಿಗೆ ಅಡ್ಡವಾಗಿ ಬೈಕೊಂದು ಬಂದಿದೆ. ಕಾರು ಬೈಕಿಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಜಗ್ಗೇಶ್ ಪುತ್ರ ಗುರುರಾಜ್ ಅವರು ಕಾರನ್ನು ಸೈಡಿಗೆ ತಿರುಗಿಸಿದ್ದಾರೆ. ಆ ಸಂದರ್ಭದಲ್ಲಿ ಕಾರು ಮೂರು ಪಲ್ಟಿ ಹೊಡೆದಿದ್ದು ನಂತರ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಗುರುರಾಜ್ ಡ್ರೈವ್ ಮಾಡುತ್ತಿದ್ದ ಕಾರು ಜಗ್ಗೇಶ್ ಅವರ ಹೆಸರಿನಲ್ಲಿದ್ದು ಬಿ ಎಂ ಡಬ್ಲ್ಯೂ ಕಾರು ಅದಾಗಿದೆ. ಕಾರಿನ ಏರ್ಬ್ಯಾಗ್ ಓಪನ್ ಆಗಿ ಒಳಗಿದ್ದವರನ್ನು ರಕ್ಷಣೆ ಮಾಡಿದೆ. ಅದೃಷ್ಟವಶಾತ್
ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಸುತ್ತಮುತ್ತ ಯಾರೂ ಇಲ್ಲದ ಕಾರಣ ಬೇರೆ ಯಾರಿಗೂ ಗಾಯವಾಗಿಲ್ಲ.
ಚಿಕ್ಕಬಳ್ಳಾಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Leave A Reply

Your email address will not be published.