ಕೆರೆಯಲ್ಲಿ ದನ ತೊಳೆಯುತ್ತಿರುವಾಗ ದುರಂತ ಅಂತ್ಯ ಕಂಡ ಇಬ್ಬರು ಬಾಲಕರು

ಹಾವೇರಿ: ಹಿರೆಕೇರೂರು ತಾಲೂಕಿನ ದೂದಿಹಳ್ಳಿ ಗ್ರಾಮದ ಬಾಲಕರಿಬ್ಬರು ಹಸುವಿನ ಮೈತೊಳೆಯಲು ಹೋಗಿ ದುರಂತ ಅಂತ್ಯ ಕಂಡ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.

ಅಭಿಷೇಕ ಹಂಡೋರಿ ಮತ್ತು ಹರೀಶ ಬಾಳಿಕಾಯಿ ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.

ಇವರಿಬ್ಬರು ಗೂದಿಹಳ್ಳಿ ಗ್ರಾಮದ ಮಾಸೂರು ರಸ್ತೆ ಬಳಿಯ ಕೆರೆಯಲ್ಲಿ ಹಸುವಿನ ಮೈತೊಳೆಯಲು ಹೋಗಿದ್ದರು. ಈ ವೇಳೆ ಕೆರೆಯಲ್ಲಿ ಕಾಲು ಜಾರಿ ಬಿದ್ದು ಈಜಲು ಬಾರದೆ ಜಲಸಮಾಧಿ ಆಗಿದ್ದಾರೆ. ಬಾಲಕರಿಬ್ಬರು ಉತ್ತಮ ಸ್ನೇಹಿತರಾಗಿದ್ದು, ಯಾವಾಗಲೂ ಜೊತೆಯಾಗಿರುತ್ತಿದ್ದರು ಎಂದು ತಿಳಿದು ಬಂದಿದೆ.

ಬಾಲಕರನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು. ಹಿರೆಕೇರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.