ಪಾಲ್ತಾಡಿ : ಬಿಜೆಪಿ ಸುಳ್ಯ ಮಂಡಲದ ವೃಕ್ಷಾರೋಪಣ | ಮೈಲಾಕ್ ಅಧ್ಯಕ್ಷ ಎಂ.ವಿ.ಫಣೀಶ್ ಅವರಿಂದ ಚಾಲನೆ

ಸವಣೂರು : ಜನಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಜಯಂತಿ ಹಾಗೂ ಬಲಿದಾನ ದಿನದ ಅಂಗವಾಗಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಜೂನ್ 23ರಿಂದ ಜುಲೈ 6ರವರೆಗೆ ಕೈಗೊಂಡಿರುವ ‘ವೃಕ್ಷಾರೋಪಣ ಅಭಿಯಾನ’ದ ಅಂಗವಾಗಿ ಸುಳ್ಯ ಬಿಜೆಪಿ ಮಂಡಲದ ಕಾರ್ಯಕ್ರಮ ಪಾಲ್ತಾಡಿ ಗ್ರಾಮದ ಬಂಬಿಲದಲ್ಲಿ ಜೂ.29ರಂದು ನಡೆಯಿತು.

ಮೈಸೂರು ಬಣ್ಣ ಹಾಗೂ ಅರಗು ಕಾರ್ಖಾನೆಯ(ಮೈಲಾಕ್) ನಿಗಮದ ಅಧ್ಯಕ್ಷ ,ರಾಜ್ಯ ಬಿಜೆಪಿ ವೃಕ್ಷಾರೋಪಣ ಪ್ರಮುಖ್ ಎಂ.ವಿ. ಫಣೀಶ್ ಚಾಲನೆ ನೀಡಿ ಮಾತನಾಡಿ,ಪ್ರಸ್ತುತ ಕೋವಿಡ್ ಸಂಕಷ್ಟ ಸಮಯದಲ್ಲಿ ಆಕ್ಸಿಜನ್ ಅಭಾವ ಕಾಡಿದೆ.ಈ ನಿಟ್ಟಿನಲ್ಲಿ ಬಿಜೆಪಿಯ ವತಿಯಿಂದ ಹಸೀರಿಕರಣಕ್ಕೆ ರಾಜ್ಯಾದ್ಯಂತ ವೃಕ್ಷಾರೋಪಣ ಕಾರ್ಯಕ್ರಮ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರ ನೆನಪಿನಲ್ಲಿ ನಡೆಯುತ್ತಿದೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ‌ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಮಾತನಾಡಿ, ಬಿಜೆಪಿ ಪಕ್ಷ ಕೇವಲ ರಾಜಕೀಯ ಮಾಡಲು ಇರುವುದಲ್ಲ.ಸಾಮಾಜಿಕ ಕಾರ್ಯವನ್ನೂ ಮಾಡುತ್ತಿದೆ.ಕೋವಿಡ್ ಸಂಕಷ್ಟದಲ್ಲಿ ನೂರಾರು ಕಾರ್ಯಕರ್ತರು ಹಗಲಿರುಳು ಎನ್ನದೆ ಸೇವೆ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ,ವೃಕ್ಷಾರೋಪಣ ಜಿಲ್ಲಾ ಪ್ರಮುಖ್ ವಸಂತ ಅಣ್ಣ ಳಿಕೆ,ಬಿ.ಕೆ.ರಮೇಶ್ ಕಲ್ಲೂರಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿ ಇಂದಿರಾ ಬಿ.ಕೆ.ಇಂದಿರಾ ಸ್ವಾಗತಿಸಿ,ಪಾಲ್ತಾಡಿ ಬೂತ್ 70 ರ ಅಧ್ಯಕ್ಷ ಅನ್ನಪೂರ್ಣ ಪ್ರಸಾದ್ ರೈ ವಂದಿಸಿದರು.ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.ಸುಭೋದ್ ಶೆಟ್ಟಿ ಮೇನಾಲ ವರದಿ ವಾಚಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿ ಶ್ರೀನಾಥ್ ಬಾಳಿಲ,ಬೆಳಂದೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ,ಯುವಮೋರ್ಛಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕೇರ್ಪಳ,ಚೇತನ್ ನಾವೂರು, ಸವಣೂರು ಗ್ರಾ.ಪಂ.ಸದಸ್ಯರಾದ ಸತೀಶ್ ಅಂಗಡಿಮೂಲೆ,ಸುಂದರಿ ,ಹರಿಕಲಾ ರೈ,ಭರತ್ ರೈ,ಕಾಣಿಯೂರು ಗ್ರಾ.ಪಂ.ಸದಸ್ಯ ಲೋಕಯ್ಯ ಪರವ,ಬೂತ್ ಸಮಿತಿ ಕಾರ್ಯದರ್ಶಿ ಹೊನ್ನಪ್ಪ ಗೌಡ ಜಾರಿಗೆತ್ತಡಿ,ಬಾಳಪ್ಪ ಪೂಜಾರಿ ಬಂಬಿಲದೋಳ, ರೋಹಿತ್ ರೈ ಕುಂಜಾಡಿ,ರವಿ ಕುಮಾರ್ ಬಿ.ಕೆ,ಸವಣೂರು ಸಿಎ ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ,ಪಾಲ್ತಾಡಿ ಶಕ್ತಿ ಕೇಂದ್ರ ಸಹ ಪ್ರಮುಖ್ ಮಹೇಶ್ ಕೆ.ಸವಣೂರು,ಬಿಜೆಪಿ ಸಾಮಾಜಿಕ ಜಾಲತಾಣ ಸುಳ್ಯ ಮಂಡಲ ಸದಸ್ಯ ಪ್ರವೀಣ್ ಕುಮಾರ್,ವಿಠಲ ಶೆಟ್ಟಿ ,ಪ್ರಜ್ವಲ್ ,ಪುಟ್ಟಣ್ಣ ಪರಣೆ ಮೊದಲಾದವರಿದ್ದರು.

Leave A Reply

Your email address will not be published.