ಪುತ್ತೂರು : ಪಕ್ಕದ ಮನೆಯವನ ಜಾಗಕ್ಕೆ ಬಾಳೆಗಿಡ ವಾಲಿತು | ಮನೆಯವರು ಪರಸ್ಪರ ಬಡಿದಾಡಿಕೊಂಡರು

ಪುತ್ತೂರು: ಬಾಳೆಗಿಡವೊಂದು ಪಕ್ಕದ ಮನೆಯ ಅಂಗಳಕ್ಕೆ ವಾಲಿದ ವಿಚಾರಕ್ಕೆ ಸಂಬಂಧಿಸಿ ಪರಸ್ಪರ ಹಲ್ಲೆ ನಡೆದ ಘಟನೆ ಪುತ್ತೂರು ಬನ್ನೂರಿನ ಆನೆಮಜಲಿನಲ್ಲಿ ನಡೆದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರ ವಿರುದ್ಧವೂ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬನ್ನೂರು ಗ್ರಾಮದ ಆನೆಮಜಲು ನಿವಾಸಿ ಮಣಿ ಮತ್ತು ಉಗ್ಗಪ್ಪ ಅವರು ಪರಸ್ಪರ ಹಲ್ಲೆ ಆರೋಪ ಹೊರಿಸಿದವರಾಗಿದ್ದಾರೆ.
ಮಣಿ ಎಂಬವರ ಮನೆಯಂಗಳದ ಬಾಳೆಗಿಡ ಉಗಪ್ಪ ಎಂಬವರ ಆವರಣಕ್ಕೆ ವಾಲಿರುವ ಕುರಿತು ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿ ಮಣಿ ಮತ್ತು ಉಗ್ಗಪ್ಪ ಎಂಬವರು ಪರಸ್ಪರ ಆರೋಪಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಪೊಲೀಸರು ಮಾಹಿತಿ ಪಡೆದು ಇತ್ತಂಡದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ

Leave A Reply

Your email address will not be published.