ಸೀಲ್ ಡೌನ್ ಆದ ಬಂಟ್ವಾಳ ಕಳ್ಳಿಗೆ ಪ.ಜಾತಿ ಕಾಲನಿ ಪ್ರದೇಶಕ್ಕೆ ಅಹಾರ ಕಿಟ್ ನೀಡುವಂತೆ ಮನವಿ.

ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮ ಪಂಚಾಯತಿಗೆ ಒಳಪಡುವ ಪಚ್ಚಿನಡ್ಕ ಎಂಬಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಪ.ಜಾತಿ ಬೈರ ಕಾಲೋನಿಯ ಹನ್ನೊಂದು ದಲಿತ ಕುಟುಂಬಗಳ ಮನೆಯನ್ನು ಸೀಲ್ ಡೌನ್ ಮಾಡಿದ್ದು,ಈ ಪ್ರದೇಶದ ಜನತೆಗೆ ಗ್ರಾಮ ಪಂಚಾಯತ್ ವತಿಯಿಂದ ದಿನಸಿ ಸಾಮಾಗ್ರಿಗಳ ಕಿಟ್ಟನ್ನು ನೀಡುವಂತೆ ಕಳ್ಳಿಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಳ್ತಂಗಡಿ ತಾಲೂಕು ಸಂಘಟನಾ ಸಂಚಾಲಕ ನಾಗರಾಜ್ ಎಸ್.ಲಾಯಿಲ ಅವರು ಮನವಿ ಸಲ್ಲಿಸಿದರು.

ಈ ಮನವಿಯನ್ನು ಸ್ವೀಕರಿಸಿದ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಈ ಬಗ್ಗೆ ಸಂತ್ರಸ್ತರಿಗೆ ಹಾಗು ಪಚ್ಚಿನಡ್ಕ ಕಾಲೋನಿಯ ದಲಿತ ಕುಟುಂಬಗಳಿಗೆ ಅಹಾರ ಸಾಮಾಗ್ರಿಗಳ ಕಿಟ್ಟನ್ನು ನೀಡುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದಲಿತ ಮುಖಂಡ ದಿನೇಶ್ ಮೂಳುರು ಉಪಸ್ಥಿತರಿದ್ದರು.

Leave A Reply

Your email address will not be published.