ಲತೀಶ್ ‌ಗುಂಡ್ಯ ವಿರುದ್ಧ ಸುಳ್ಳು ಆರೋಪ- ಬೈರ ಸಮಾಜ ಖಂಡನೆ

ಸಾಮಾಜಿಕ ಕಾರ್ಯಕರ್ತ ಕೋವಿಡ್ ವಾರಿಯರ್ ಭಜರಂಗದಳ ಮುಖಂಡ ಲತೀಶ್ ‌ಗುಂಡ್ಯ ರವರ ಮೇಲೆ ಅಭಿಲಾಶ್ ಎಂಬವರು ದಲಿತ ಮುಖಂಡ ಸುಂದರ ಪಾಟಾಜೆಯವರ ದಿಕ್ಕು ತಪ್ಪಿಸಿ ಸುಳ್ಳು ಆರೋಪ ಮಾಡಿರುವುದನ್ನು ಕ.ರಾಜ್ಯ ಬೈರ ಸಮಾಜ ನಿರ್ಮಾಣ ವೇದಿಕೆ ಖಂಡಿಸುತ್ತಿದೆ.

ಅಂಬುಲೆನ್ಸ್ ಚಾಲಕ ಅಭಿಲಾಶ್ ಲತೀಶ್ ದಲಿತ ಎನ್ನುವ ಮಾತ್ರಕ್ಕೆ ಇದೀಗ ಸುಂದರ್ ಪಾಟಾಜೆಯವರಿಂದ ಕೊಲೆ ಬೆದರಿಕೆ, ಅನ್ಯ ಜಾತಿಯವರ ಮೇಲೆ ಕೋಮು ಭಾವನೆಗಳನ್ನು ಕೆರಳಿಸುವಂತ ವಿನಾಧಾರವಾದ ಸುಳ್ಳು ದೂರನ್ನು ಸುಳ್ಯ ಪೋಲಿಸ್ ಠಾಣೆಗೆ ನೀಡಿರುವುದು ಆಕ್ಷೇಪಾರ್ಹ.

ಅಸ್ಪತ್ರೆ ದಾಖಲೆ ಹಾಗೂ ಆಡಿಯೋ ರೆಕಾರ್ಡಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿರುವುದರಿಂದ ಇದೊಂದು ಸಾಮಾಜಿಕ ಹೋರಾಟಗಾರರ ದಿಕ್ಕು ತಪ್ಪಿಸುವ ಹುನ್ನಾರ ಎಂದು ಸ್ಪಷ್ಟವಾಗುತ್ತಿದೆ. ಈ ರೀತಿಯಾಗಿ ನಮ್ಮ ದಲಿತ ಸಮುದಾಯದ ಲತೀಶ್ ಗುಂಡ್ಯ ರವರ ವಿರುದ್ಧ ಸುಳ್ಳು ದೂರನ್ನು ನೀಡಿರುವುದನ್ನು ಬೆಳ್ತಂಗಡಿ ಕರ್ನಾಟಕ ರಾಜ್ಯ ಬೈರ ಸಮಾಜ ನಿರ್ಮಾಣ ವೇದಿಕೆಯು ಖಂಡಿಸುತ್ತದೆ . ಈ ದೂರಿನ ಬಗ್ಗೆ ಸಂಘಟನೆಯ ಪ್ರಮುಖ ನಾಗರಾಜ್ ಎಸ್. ಲಾಯಿಲ ಸುಳ್ಯ ವೃತ್ತ ನೀರಿಕ್ಷರರಲ್ಲಿ ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡಬೇಕಾಗಿ ಒತ್ತಾಯಿಸಿರುವುದಾಗಿ ತಿಳಿದು ಬಂದಿದೆ.

Leave A Reply

Your email address will not be published.