ಪುತ್ತೂರು | ರಿಯಲ್ ಎಸ್ಟೇಟ್ ಉದ್ಯಮಿಗಳಾದ ರೋಶನ್ ರೈ ಬನ್ನೂರು ಮತ್ತು ದಾವೂದ್ ನಡುವೆ ಪರಸ್ಪರ ಹಲ್ಲೆ ,ಆಸ್ಪತ್ರೆಗೆ ದಾಖಲು

ಕಾರು ನಿಲ್ಲಿಸಿ ಹಲ್ಲೆ ಮತ್ತು ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆದ ಎರಡು ‌ಪ್ರತ್ಯೇಕ ಆರೋಪಗಳ ಅಡಿ ಬನ್ನೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳಿಬ್ಬರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪೊಲೀಸರು ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರಿನಲ್ಲಿದ್ದ ಉದ್ಯಮಿ ರೋಶನ್ ರೈ ಮತ್ತು ಬೈಕ್ ಸವಾರ ದಾವೂದ್ ಇಬ್ಬರು ಪರಸ್ಪರ ಆರೋಪ ಹೊರಿಸಿದ್ದು, ಹಲ್ಲೆಯ ಕಾರಣದಿಂದ ಇಬ್ಬರು ಗಾಯಗೊಂಡಿದ್ದಾರೆ ಹಾಗೂ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಮಂಜಲ್ಪಡುವಿನ ಜಾಗದಲ್ಲಿ ಮಣ್ಣು ತೆಗೆಯುವ ವಿಷಯವಾಗಿ ರೋಶನ್ ರೈ ಮತ್ತು ದಾವೂದ್ ನಡುವೆ ಭಿನ್ನಾಭಿಪ್ರಾಯವಿದ್ದು, ಈ ವಿಷಯವಾಗಿ ದಾವೂದ್ ಪುತ್ತೂರು ಕಾಂಗ್ರೆಸ್ ಗ್ರೂಪ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಐಬಿನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ನಕಲಿ ಸಂದೇಶ ಒಂದನ್ನು ರವಾನಿಸಿದ್ದು, ಈ ವಿಷಯವಾಗಿ ರೋಶನ್ ರೈ ಬನ್ನೂರು ಮತ್ತು ದಾವೂದ್ ನ ನಡುವೆ ಚರ್ಚೆ ನಡೆದಿದೆ ಎನ್ನಲಾಗಿದೆ. ಇದೇ ವಿಷಯ ಪರಸ್ಪರ ಹಲ್ಲೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಸದ್ಯಕ್ಕೆ ಇಬ್ಬರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave A Reply

Your email address will not be published.