ತೋಟಕ್ಕೆ ನೀರು ಹರಿಸಿ ಮನೆಗೆ ಬರುವಾಗ ಮಗಳ ರೂಮಿ ನಿಂದ ಬರುತ್ತಿತ್ತು ವಿಚಿತ್ರ ಸದ್ದು | ಇನ್ನೈದು ನಿಮಿಷಗಳಲ್ಲಿ ಅಲ್ಲಿ ಹೆಣವೊಂದು ಬಿದ್ದಿತ್ತು !

ಪ್ರೇಯಸಿಯನ್ನು ಭೇಟಿ ಮಾಡಲು ಹೋದ ಯುವಕನೊಬ್ಬ ಆಕೆಯ ತಂದೆಯ ಕೈಯಿಂದ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಚಿತ್ತೂರು ಜಿಲ್ಲೆಯ ಪಲಮನೇರುವಿನಲ್ಲಿ ನಡೆದಿದೆ.

ಕೊಲೆಯಾದ ಯುವಕ ಧನಶೇಖರ್ (23) ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಮಂಡಲದ ಪೆಂಗಾರಗುಂಟ ಮೂಲದವನು. ಆತನಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಇದೇ ತಿಂಗಳು 22ರಂದು ತವರಿಗೆ ಮರಳಿದ್ದ. ಬಂದವನೇ ತನ್ನ. ಮೈನರ್ ಗೆಳತಿಯನ್ನು ಭೇಟಿಯಾಗಲು ಹೋಗಿ ಆಕೆಯ ತಂದೆಯ ಕೈಯಿಂದ ಹತನಾಗಿ ಹೋಗಿದ್ದಾನೆ.

ಏನು ಈ ಕ್ರೈಮ್ ಸ್ಟೋರಿ?

ವಾರಗಳ ಕೆಳಗೆ ಮೇ 22 ನೇ ತಾರೀಕು ಆಗತಾನೆ ಇದೀಗ ಕೊಲೆಯಾಗಿದ್ದ ವ್ಯಕ್ತಿ ಬೆಂಗಳೂರಿನಿಂದ ತನ್ನ ಹುಟ್ಟೂರು ಪಲಮನೇರು ಗೆ ಬಂದಿದ್ದ. ಅದೇ ದಿನ ರಾತ್ರಿ 10 ಗಂಟೆಗೆ ಫೋನ್‌ನಲ್ಲಿ ಮಾತನಾಡುತ್ತಾ ಮನೆಯಿಂದ ಆತ ಹೊರನಡೆದಿದ್ದ. ತನ್ನ ಮನೆಯವರ ಬಳಿ ಇಲ್ಲೇ ಪಕ್ಕದಲ್ಲಿ ಗೆಳೆಯರ ಮನೆಗೆ ಹೋಗಿ ಇನ್ನೊಂದು ಗಂಟೆಯಲ್ಲಿ ಬರುತ್ತೇನೆ ಎಂದು ಹೇಳಿ ಹೋಗಿದ್ದ. ಹಾಗೆ ಮನೆಯಿಂದ ಹೊರಕ್ಕೆ ಹೋದ ಯುವಕ ಅಂದು ಮನೆಗೆ ಬರಲಿಲ್ಲ. ಏನೋ ಹುಡುಗರು ಪಾರ್ಟಿ ಮಾಡಿಕೊಂಡು ಅಲ್ಲೇ ಝಂಡಾ ಊರಿ ಮಲಗಿರಬಹುದು ಎಂದುಕೊಂಡ ಮನೆಯವರು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಮರುದಿನ ಕೂಡ ಆತನ ಯಾವುದೇ ಸುಳಿವು ಇರಲಿಲ್ಲ ಮತ್ತು ಆತನ ಫೋನ್ ಸ್ವಿಚ್ ಆಫ್ ಆಗಿತ್ತು.

ಆಗ ಆತನ ತಂದೆ ಸ್ಥಳೀಯ ಪೊಲೀಸ್ ಠಾಣೆಗೆ ಮೇ 26ರಂದು ನಾಪತ್ತೆ ಪ್ರಕರಣ ದಾಖಲಿಸುತ್ತಾರೆ ಮತ್ತು ವಿಷಯ ತಿಳಿದ ತಕ್ಷಣ ಮೃತ ಧನಶೇಖರನ ಫೋನ್ ಕಾಲ್ ಮಾಹಿತಿ ಆಧರಿಸಿ ಪೊಲೀಸರು ತನಿಖೆಗೆ ಇಳಿಯುತ್ತಾರೆ.

ಅವತ್ತು ಕೊನೆಯದಾಗಿ ಧನಶೇಖರ್ ಕರೆ ಮಾಡಿದ ಜಾಡು ಹಿಡಿದು ಹೊರಟ ಪೊಲೀಸರಿಗೆ ಎದುರಾಗಿದ್ದು ಆ ಹುಡುಗಿ !

ಅವಳು ಧನ್‌ಶೇಖರ್ ಪ್ರೀತಿಸುತ್ತಿದ್ದ 17 ವರ್ಷ ಪ್ರಾಯದ ಹುಡುಗಿ. ಇನ್ನೂ ಪ್ರಾಪ್ತ ವಯಸ್ಸಿಗೆ ಬಾರದೆ ಹೋದರೂ ಆಕೆ ಮತ್ತು ಧನಶೇಖರ್ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು.

ಮೇ 22ರ ರಾತ್ರಿ 10 ಗಂಟೆಗೆ ಧನಶೇಖರ್ ಹುಡುಗಿಗೆ ಕರೆ ಮಾಡಿ, ಆಕೆಯ ಮನೆಗೆ ತೆರಳಿದ್ದಾನೆ. ಆಕೆಯ ತಂದೆ ಪ್ರತಿದಿನ ರಾತ್ರಿ 10 ಗಂಟೆ ತೋಟಕ್ಕೆ ಹೋಗಿ ಬರುತ್ತಿದ್ದ. ಅಂದು ಕೂಡ ಆಕೆಯ ಅಪ್ಪ ಬಾಬು ತೋಟಕ್ಕೆ ಹೊರಟುಹೋಗಿದ್ದ. ಹುಡುಗಿಯ ತಂದೆ ಬಾಬು ಎಂದಿನಂತೆ 11 ಗಂಟೆಗೆ ಮನೆಗೆ ಮರಳಿದ್ದಾನೆ.

ಈ ವೇಳೆ ಮನೆಯಲ್ಲಿ ಮಗಳ ಕೋಣೆಯ ಒಳಗಿನಿಂದ ವಿಶೇಷ ಸದ್ದು ಕೇಳಿಬಂದಿದೆ. ಗಾಬರಿ ಮತ್ತು ಅನುಮಾನಗೊಂಡ ಆಕೆಯ ಅಪ್ಪ ಬಾಗಿಲು ತೆರೆದಾಗ ಆಕೆಯ ಮಗಳ ಜೊತೆಗೆ ಹುಡುಗನೊಬ್ಬ ಒಟ್ಟಿಗೆ ಮಲಗಿರುವುದನ್ನು ಕಾಣುತ್ತಾನೆ. ತನ್ನ ಮಗಳ ಜತೆ ನೋಡಬಾರದ ಸ್ಥಿತಿಯಲ್ಲಿ ಕಂಡ ಅಪ್ಪನ ಕೋಪ ತಕ್ಷಣ ಕೈಗೆ ಬರುತ್ತದೆ. ಅಲ್ಲೇ ಸಿಕ್ಕ ಬಿದಿರ ಕೋಲಿನಿಂದ ಚೆನ್ನಾಗಿ ಯುವಕನನ್ನು ಥಳಿಸುತ್ತಾನೆ ಅಪ್ಪ. ಏಟು ಜೋರಾಗಿ ಬಿದ್ದಿತ್ತು ಮತ್ತು ಬೀಳಬಾರದ ಸ್ಥಳಕ್ಕೆ ನಾಟಿತ್ತು. ಹುಡುಗ ಅಲ್ಲೇ ಸದ್ದು ಬಿದ್ದಿದ್ದಾನೆ.

ಇದಾದ ಬಳಿಕ ಹುಡುಗಿಯ ಅಪ್ಪ ಬಾಬುವಿಗೆ ಏನು ಮಾಡಬೇಕೆಂದು ತಕ್ಷಣಕ್ಕೆ ತೋಚಿಲ್ಲ. ಹೇಗಾದರೂ ಮಾಡಿ ಈ ಹತ್ಯೆಯಿಂದ ತಪ್ಪಿಸಿಕೊಳ್ಳಬೇಕೆಂದು ಅಂದುಕೊಂಡ ಆತ ಯುವಕನ ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿ ಹತ್ತಿರದ ಚಿನ್ನಕುಂಟದಲ್ಲಿರುವ ಬಾವಿಯೊಂದಕ್ಕೆ ಎಸೆದು ಮನೆಗೆ ಹಿಂದಿರುಗಿದ್ದಾನೆ.

ಎರಡು ದಿನಗಳ ಬಳಿಕ ಆತ ಮತ್ತೆ ಬಾವಿಯ ಬಳಿ ಹೋಗಿ ಇಣುಕಿ ನೋಡಿದಾಗ ಮೃತದೇಹ ತೇಲುವುದನ್ನು ಗಮನಿಸಿ, ಕೆಲವರ ಸಹಾಯದಿಂದ ಅದನ್ನು ಮೇಲೆತ್ತಿ ವಾಪಸ್ ತರುತ್ತಾನೆ. ನಂತರ ಆ ಹುಡುಗನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಹತ್ತಿರದ ಕಾಡಿನಲ್ಲಿ ಹೂತು ಹಾಕಿ ಬಂದು ಮನೆಯಲ್ಲಿ ಕೈ ತೊಳೆದು ಊಟಕ್ಕೆ ಕೂರಬೇಕು ಅನ್ನುವಷ್ಟರಲ್ಲಿ ಪೊಲೀಸರು ಮನೆಬಾಗಿಿ ಲಲ್ಲಿ ಬಂದು ನಿಂತಿದ್ದರು.

ನಿನ್ನೆ, ಶುಕ್ರವಾರ ಪೊಲೀಸ್ರು ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಯುವತಿಯ ಅಪ್ಪ ಬಾಬುವನ್ನು ಬಂಧಿಸಿದ್ದಾರೆ

Leave A Reply

Your email address will not be published.