ಅಕ್ರಮ ಮರ ಸಾಗಾಟ | ಆರೋಪಿ ಸಹಿತ ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

ಮಂಗಳೂರು: ಮಂಗಳೂರಿನಲ್ಲಿ ಲಕ್ಷಾಂತರ ರೂ ಮೌಲ್ಯದ ಮರ ಸಾಗಾಣಿಕೆ ವಾಹನ ಸಹಿತ ಆರೋಪಿಯನ್ನು ಅರಣ್ಯ ಇಲಾಖಾ ಅಧಿಕಾರಿಗಳು ಬಂಧಿಸಿದ ಘಟನೆ ನಡೆದಿದೆ.

ಕಾಪು ತಾಲೂಕ್ ಸುಭಾಶನಗರ ಮೂಡಬೆಟ್ಟು ಗ್ರಾಮದ ಮಹಮದ್ ಹಾರೂನ್ ಬಂಧಿತ ಆರೋಪಿ. ಅಂದಾಜು 2.5ಲಕ್ಷ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನಾ ವಿವರ:

ಮೇ. 25 ರಂದು ಮುಂಜಾನೆ ಮಂಗಳೂರು ತಾಲೂಕು ಸುರತ್ಕಲ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ರ ಮುಕ್ಕ ಎಂಬಲ್ಲಿ ಅಕ್ರಮವಾಗಿ ರಹದಾರಿ ರಹಿತ ಮರದ ದಿಮ್ಮಿಗಳನ್ನು ಸಾಗಾಟ ಮಾಡುವ ಮಾಹಿತಿ ಮೇರೆಗೆ ಮಂಗಳೂರು ವಲಯ ಅರಣ್ಯಾಧಕಾರಿಯಾದ ಶ್ರೀಧರ್ ಪಿ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕೃಷ್ಣ , ವಿನಯ್ ಕುಮಾರ್, ಮೋಹನ್, ಸೋಮನ ಗೌಡ ಪಾಟೀಲ್ ಹಾಗೂ ಚಾಲಕ ಸುನಿಲ್ ಬಿ ಸಿ ಪತ್ತೆಹಚ್ಚಿ ಕೇಸು ದಾಖಲಿಸಿರುತ್ತಾರೆ. ಆರೋಪಿ ಚಾಲಕನಾದ ಕಾಪು ತಾಲೂಕ್ ಸುಭಾಶನಗರ ಮೂಡಬೇತ್ತು ಗ್ರಾಮದ ಮಹಮದ್ ಹಾರೂನ್ ಮೇಲೆ ಪ್ರಕರಣ ದಾಖಲಿಸಿಕೊಂಡು ಸೊತ್ತು ಮತ್ತು ವಾಹನವನ್ನು ಸೀಝ್ ಮಾಡಿಕೊಳ್ಳಲಾಯಿತು.

ಮುಂದಿನ ತನಿಖೆಯನ್ನು ಡಿಸಿಎಫ್ ಕರಿಕಳನ್ ಮತ್ತು ಎಸಿಎಫ್ ಸುಬ್ರಮಣ್ಯ ರಾವ್ ಇವರ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿ ಶ್ರೀಧರ್ ಪಿ ನೆಡೆಸುತ್ತಿದ್ದಾರೆ.

Leave A Reply

Your email address will not be published.