ನೆಲ್ಯಾಡಿ ಸಮೀಪ ಮಳೆಗೆ ರಸ್ತೆ ಕಾಣದೆ ಎರಡು ಭಾರೀ ವಾಹನಗಳ ಡಿಕ್ಕಿ

Share the Article

ನೆಲ್ಯಾಡಿಯ ಸಮೀಪ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಯಲ್ಲಿ ಟ್ಯಾಂಕರ್ -ಕಂಟೈನರ್ ನಡುವೆ ಡಿಕ್ಕಿ ಉಂಟಾಗಿದೆೆ.

ಈ ಸಂಜೆ ನಡೆದ ಅಪಘಾತದಲ್ಲಿ ಕಂಟೈನರ್ ಚಾಲಕನ ಕಾಲಿಗೆ ಗಾಯವಾಗಿದೆ.

ಇಂದು ಸಂಜೆ ಭಾರಿ ಮಳೆ ಸುರಿದಿದ್ದು ರಸ್ತೆ ಸರಿಯಾಗಿ ಗೋಚರಿಸದೆ ಈ ಅಪಘಾತ ನಡೆದಿದೆ ಎನ್ನಲಾಗಿದೆ.  ಬೆಂಗಳೂರಿನ ಕಡೆಯಿಂದ ಮಂಗಳೂರಿಗೆ ಬರುತ್ತಿರುವ ಕಂಟೈನರ್ ಮತ್ತು ಮಂಗಳೂರಿನಿಂದ ಬೆಂಗಳೂರು ಕಡೆಗೆ ತೈಲ ಸಾಗಾಟದ ಟ್ಯಾಂಕರ್ ನಡುವೆ ಅಪಘಾತ ಇದಾಗಿದ್ದು, ಸ್ವಲ್ಪ ಸಮಯ ಸಂಚಾರ ವ್ಯತ್ಯಯ ಉಂಟಾಗಿತ್ತು.
ನಂತರ ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೊಲೀಸರು ಆಗಮಿಸಿ, ರಸ್ತೆ ಸಂಚಾರ ಸುಗಮ ಗೊಳಿಸಿದ್ದಾರೆ.

Leave A Reply

Your email address will not be published.