ನದಿಯಲ್ಲಿ ಮುಳುಗಿ ಪುತ್ತೂರಿನ ಮೂವರು ಯುವಕರು ಮೃತ್ಯು

ಸ್ನಾನ ಮಾಡಲು ನದಿಗೆ ಇಳಿದ ಮೂರು ಮಂದಿ ಯುವಕರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಕುಂಬಳೆ ಸಮೀಪದ ಆರಿಕ್ಕಾಡಿ ಎಂಬಲ್ಲಿ ನಡೆದಿದೆ.

ಪುತ್ತೂರು ನಿವಾಸಿಗಳಾದ ಕೀರ್ತನ್ (19) ಮತ್ತು ಕಾರ್ತಿಕ್ (18) ,ನಿರಂಜನ್ಎಂಬವರು ಮೃತಪಟ್ಟಿವರು ಎಂದು ತಿಳಿದುಬಂದಿದೆ.

ಸೋಮವಾರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಆರಿಕ್ಕಾಡಿ ಸಮೀಪ ನದಿಯಲ್ಲಿ ಮೂವರು ಸ್ನಾನ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು, ವಿಷಯ ತಿಳಿದು ಶೋಧ ನಡೆಸಿದ ಮೀನುಗಾರರು ಮತ್ತು ಸ್ಥಳೀಯರು  ಮೃತದೇಹವನ್ನು ಮೇಲೆಕ್ಕೆತ್ತಿದ್ದು, ಇನ್ನೋರ್ವ ನಾಪತ್ತೆಯಾಗಿದ್ದಾರೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಯುವಕರು ಕುಂಬಳೆಯಲ್ಲಿ ನಡೆದ ವಿವಾಹದಲ್ಲಿ ಪಾಲ್ಗೊಳ್ಳಲು ಬಂದಿದ್ದು,ಸಂಜೆ ಬಿಡುವು ಇದ್ದ ಕಾರಣ ನದಿಗೆ ಸ್ನಾನ ಮಾಡಲು ತೆರಳಿದ್ದರು ಎನ್ನಲಾಗಿದೆ.

ಒಬ್ಬ ನೀರಿಗೆ ಇಳಿದು ಮುಳುಗುವಾಗ ಇಬ್ಬರು ರಕ್ಷಣೆಗೆ ಇಳಿದರು ಎನ್ನಲಾಗಿದೆ.ಈ ವೇಳೆ ಅವರೂ ನೀರಿನಲ್ಲಿ ಮುಳುಗಿದರೆನ್ನಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿ ಇಬ್ಬರ ಮೃತದೇಹವನ್ನು ಮೇಲಕ್ಕೆತ್ತಿದರು. ಈ ವೇಳೆ ನಾಪತ್ತೆಯಾಗಿದ್ದ ನಿರಂಜನ್‌ರ ಮೃತದೇಹ ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ರಾತ್ರಿಯ ವೇಳೆ ಸ್ಥಳೀಯರು ಪತ್ತೆಹಚ್ಚಿ ಮೇಲೆತ್ತಿದ್ದಾರೆ.

Leave A Reply

Your email address will not be published.