ಧರ್ಮಸ್ಥಳ ದಿಂದ ಹೊರಟ ಕಾರಿಗೆ ಕೊಕ್ಕಡ ಸಮೀಪ ಓಮ್ನಿ ಡಿಕ್ಕಿ

ಒಮ್ನಿ ಹಾಗೂ ಐ -20 ಕಾರಿನ ನಡುವೆ ಢಿಕ್ಕಿ ಸಂಭವಿಸಿ ಒಮ್ನಿಯಲ್ಲಿದ್ದ ನಾಲ್ವರು ಗಾಯಗೊಂಡಿರುವ ಘಟನೆ ಕೊಕ್ಕಡ ಸಮೀಪ ಇಂದು ಬೆಳಿಗ್ಗೆ ನಡೆದಿದೆ.

ಘಟನೆಯಲ್ಲಿ ಒಮ್ನಿಯಲ್ಲಿದ್ದ ಗೋಳಿತ್ತೊಟ್ಟು ಪಾದೆ ನಿವಾಸಿಗಳು ಗಾಯಗೊಂಡಿದ್ದಾರೆ.
ಕೊಕ್ಕಡ ಸಮೀಪದ ಕಾಪಿನ ಬಾಗಿಲು ಎಂಬಲ್ಲಿ ಈ ಅಪಘಾತ ಸಂಭವಿಸಿದ್ದು ಒಮ್ನಿ ಚಾಲಕ ಜಯರಾಮ ಶೆಟ್ಟಿ ಹಾಗೂ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಗೋಳಿತ್ತೊಟ್ಟುವಿನಿಂದ ಓಮ್ನಿ ಶಿಶಿಲಕ್ಕೆ ತೆರಳುತ್ತಿತ್ತು. ಐ-20 ಕಾರು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಸಾಗುತ್ತಿದ್ದು ಅದರಲ್ಲಿ ಕೊಪ್ಪ ನಿವಾಸಿಗಳು ಇದ್ದರು.

ನೆಲ್ಯಾಡಿ ಹೊರಠಾಣಾ ಕಾನ್ಸ್ ಟೇಬಲ್ ಸಂಗಯ್ಯ ಕಾಳೆಯವರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಯುತ್ತಿದೆ.

Leave A Reply

Your email address will not be published.