ಕುತ್ತಿಗೆಗೆ ಶಾಲು ಸಿಲುಕಿ ಬಾಲಕಿ ಮೃತ್ಯು , ಪೊಲೀಸರಿಗೆ ದೂರು
![](https://hosakannada.com/wp-content/uploads/2021/04/images-2021-03-10T102850.103.jpeg)
ಮಂಗಳೂರು : ಕುತ್ತಿಗೆಗೆ ಶಾಲು ಸಿಲುಕಿ ಬಾಲಕಿಯೋರ್ವಳು ಮೃತಪಟ್ಟ ಘಟನೆ ಕೋಟೆಕಾರು ಎಂಬಲ್ಲಿ ರವಿವಾರ ನಡೆದಿದೆ.
![](https://hosakannada.com/wp-content/uploads/2024/07/First.jpeg)
ಕಾಸರಗೋಡು ಎಡನೀರು ನಿವಾಸಿ ಕೃಷ್ಣ ನಾಯ್ಕ್ ಎಂಬವರ ಪುತ್ರಿ ಮೇಘಶ್ರೀ (13) ಮೃತ ಬಾಲಕಿ.
![](https://hosakannada.com/wp-content/uploads/2024/07/Middle.jpeg)
8ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಈಕೆ ಕೋಟೆಕಾರಿನ ಸಂಬಂಧಿಕರ ಮನೆಯಲ್ಲಿ ಇದ್ದು, ಕುತ್ತಿಗೆಗೆ ಶಾಲು ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಉಳ್ಳಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.