ಕೊರಗಜ್ಜನ ಕೋಲದ ಸಂದರ್ಭ ಕಲ್ಲು ತೂರಾಟ, ಹಫೀಜ್ ಎಂಬಾತನ ಬಂಧನ

Share the Article

ಉಳ್ಳಾಲದ ತೊಕ್ಕೊಟ್ಟು ಜಂಕ್ಷನ್ ಸಮೀಪ ಇರುವ ಕೊರಗಜ್ಜನ ಕೋಲ ನಡೆಯುವ ಸಂದರ್ಭ ನಡೆಯುತ್ತಿದ್ದ ಸಂದರ್ಭ ಕಲ್ಲುತೂರಾಟ ನಡೆದಿದೆ.

ಕೋಲ ನಡೆಯುತ್ತಿದ್ದಾಗ, ಅಲ್ಲೇ ಇರುವ ಬಿಲ್ಲಿಂಗ್ ಮೇಲೆ ನಿಂತು ಕಲ್ಲು ತೂರಲಾಗಿದೆ. ಆ ಕಲ್ಲು ಅಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನಕ್ಕೆ ಪಕ್ಕ ಬಂದು ಬಿದ್ದಿದೆ. ಆಗ ಅಲ್ಲಿ ನೆರೆದು ಕೋಲ ವೀಕ್ಷಿಸುತ್ತಿದ್ದ ನೂರಾರು ಮಂದಿ ಪೊಲೀಸರೊಂದಿಗೆ ಸೇರಿಕೊಂಡು ಕಲ್ಲು ತೂರಾಟ ನಡೆಸಿದ ವ್ಯಕ್ತಿಯನ್ನು ಹಿಡಿದಿದ್ದಾರೆ.

ಅಲ್ಲಿನ ಕೋಡಿ ನಿವಾಸಿ ಮಹಮ್ಮದ್ ಹಫೀಝ್ ಎಂಬಾತನೇ ಬಂಧಿತ ಆರೋಪಿ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಕೊರಗಜ್ಜನ ಕೋಲ ಸ್ಥಳದ ಸಮೀಪದಲ್ಲೇ ಈ ಕೃತ್ಯ ನಡೆದಿರುವುದು, ಇದು ಕೋಮು ಸಾಮರಸ್ಯ ಕದಡಲು ಯತ್ನಿಸಿದ ಘಟನೆ ಎನ್ನಲಾಗಿದೆ. ಕಲ್ಲು ತೂರಾಟ ನಡೆದರೂ ಅಲ್ಲಿ ನೆರೆದಿದ್ದ ಭಕ್ತಾಧಿಗಳು ಸಂಯಮದಿಂದ ವರ್ತಿಸಿದ್ದಾರೆ.

Leave A Reply

Your email address will not be published.