ವಿದ್ಯುತ್ ಶಾಕ್ |ಕಾವು ಮದ್ಲದ ಸುರೇಶ್ ಮೃತ್ಯು

ಪುತ್ತೂರು: ವಿದ್ಯುತ್ ಆಘಾತಗೊಂಡು ಯುವಕನೋರ್ವ ಮೃತಪಟ್ಟ ಘಟನೆ ಮೇ 22ರಂದು ರಾತ್ರಿ ಕಾವು ಮಾಡ್ನೂರು ಗ್ರಾಮದ ಕಾವು ಮದ್ಲ ಪಟ್ಟುಮೂಲೆ ಎಂಬಲ್ಲಿ ನಡೆದಿದೆ.

ಪಟ್ಟುಮೂಲೆ ನಿವಾಸಿ, ಕತ್ತರಿಸಾಣೆ ಕಾಯಕದ ಹರಿಯಪ್ಪ ಮೂಲ್ಯ ಅವರ ಪುತ್ರ ಸುರೇಶ್(22ವ.) ಮೃತಪಟ್ಟವರು.

ಸುರೇಶ್ ಅವರಿಗೆ ಮನೆಯಲ್ಲಿನ ರೆಫ್ರಿಜರೇಟರ್ ಬಳಿ ವಿದ್ಯುತ್ ಶಾಕ್ ತಗುಲಿದೆ.

ವಿದ್ಯುತ್ ಶಾಕ್‌ನಿಂದ ಅಸ್ವಸ್ಥಗೊಂಡ ಅವರನ್ನು ಮನೆ ಮಂದಿ ಪುತ್ತೂರು ಆಸ್ಪತ್ರೆಗೆ ಕರೆ ತರುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದರು.

ಮೃತರು ತಂದೆ ಹರಿಯಪ್ಪ ಮೂಲ್ಯ, ತಾಯಿ, ಸಹೋದರರಾದ ಲೋಕೇಶ್ ಮತ್ತು ಜಗದೀಶ್ ಅವರನ್ನು ಅಗಲಿದ್ದಾರೆ.

Leave A Reply

Your email address will not be published.