ಅರಿಯಡ್ಕ | ಶೇಖಮಲೆ ಶಾಲಾ ಆವರಣದ ಮರ ಕಡಿದ ಪ್ರಕರಣ | ಇಬ್ಬರ ಬಂಧನ
ಪುತ್ತೂರು: ಪಾಣಾಜೆ ವಲಯ ಅರಣ್ಯ ವ್ಯಾಪ್ತಿಯ ಶೇಕಮಲೆ ಸರಕಾರಿ ಹಿ.ಪ್ರಾ.ಶಾಲೆಯ ಖಾಸಗಿ ಸ್ಥಳದಿಂದ ಅಕ್ರಮವಾಗಿ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
![](https://hosakannada.com/wp-content/uploads/2024/07/First.jpeg)
ಶೇಖಮಲೆ ಶಾಲೆಯ ಹಿಂದುಗಡೆ ಇದ್ದ ದೂಪದ ಮರ, ಗಾಳಿ ಮರ ಹಾಗೂ ಕಟ್ಟಿಗೆ ಮರಗಳನ್ನು ಕಡಿದು ಕೊಂಡೊಯ್ದ ಬಗ್ಗೆ ಸ್ಥಳೀಯರು ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
![](https://hosakannada.com/wp-content/uploads/2024/07/Middle.jpeg)
ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಮರ ಕಡಿದ ಅರೋಪಿಗಳಾದ ಸೀತಾರಾಮ ಹಾಗೂ ಅಶೋಕ ಎಂಬವರನ್ನು ಬಂಧಿಸಿದ್ದಾರೆ.
ಇವರಿಂದ ವಶಕ್ಕೆ ಪಡೆದ ಮರದ ಒಟ್ಟು ಮೌಲ್ಯ ರೂ.3030 ಅಂದಾಜಿಸಲಾಗಿದೆ. ಕಾರ್ಯಾಚರಣೆಯು ಪಾಣಾಜೆ ಉಪ ವಲಯ ಅರಣ್ಯಾಧಿಕಾರಿ ಲೋಕೇಶ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದರು