ಸುಳ್ಯದ ಕೊಡಿಯಾಲ | ಅಲ್ಯೂಮಿನಿಯಂ ಗಳೆಯಿಂದ ಮಾವಿನ ಕಾಯಿ ಕೊಯ್ಯಲು ಹೋಗಿ ವಿದ್ಯುತ್ ಶಾಕ್ ತಗುಲಿ ಯುವಕ ಮೃತ್ಯು

ಬೆಳ್ಳಾರೆ ಸಮೀಪದ ಪಂಜಿಗಾರಿನಲ್ಲಿ ಯುವಕನೊಬ್ಬ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಘಟನೆ ಘಟನೆ ಮೇ. 18 ರಂದು ಸಂಜೆ ನಡೆದಿದೆ.

ಕೊಡಿಯಾಲ ಗ್ರಾಮದ ರಾಮಕುಮೇರು ದಿ.ಸೋಮಶೇಖರ ಕುಂದಲ್ಪಾಡಿ ಎಂಬವರ ಪುತ್ರ ನಿಶಾಂತ್ (17 ವರ್ಷ) ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ. ಮನೆಯ ಸಮೀಪದ ಮಾವಿನ ಮರದಿಂದ ಅಲ್ಯುಮಿನಿಯಂ ಗಳೆಯಿಂದ ಮಾವಿನ ಹಣ್ಣನ್ನು ಕೊಯ್ಯುತ್ತಿರುವಾಗ ಸಮೀಪವಿದ್ದ ವಿದ್ಯುತ್ ತಂತಿಗಳಿಗೆ ಗಳೆ ತಾಗಿ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ ಮೃತಪಟ್ಟನೆನ್ನಲಾಗಿದೆ. ಈತ ಪಂಜ ಸರಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು.

Leave A Reply

Your email address will not be published.