ಐವರ್ನಾಡು | ಕಾರು, ರಿಕ್ಷಾ ಮಧ್ಯೆ ಅಪಘಾತ – ಕಾರಿಗೆ ಹಾನಿ
ಪುತ್ತೂರು: ಸುಳ್ಯ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿರುವ ಸವಣೂರಿನ ರಾಕೇಶ್ ರೈ ಕೆಡೆಂಜಿ ಅವರ ಕಾರು ಹಾಗೂ ರಿಕ್ಷಾ ನಡುವೆ ಐವರ್ನಾಡಿನಲ್ಲಿ ಅಪಘಾತ ನಡೆದ ಬಗ್ಗೆ ವರದಿಯಾಗಿದೆ.
![](https://hosakannada.com/wp-content/uploads/2024/07/First.jpeg)
ರಾಕೇಶ್ ರೈ ಕೆಡೆಂಜಿ ಅವರು ಸುಳ್ಯಕ್ಕೆ ಹೋಗುತ್ತಿದ್ದಾಗ ಸುಳ್ಯ ಕಡೆಯಿಂದ ಬರುತ್ತಿದ್ದ ರಿಕ್ಷಾ ಮಧ್ಯೆ ಅಪಘಾತ ನಡೆದಿದ್ದು ಕಾರಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
![](https://hosakannada.com/wp-content/uploads/2024/07/Middle.jpeg)
ರಿಕ್ಷಾ ವೇಗದಲ್ಲಿ ಬಂದು ತಿರುವಿನಲ್ಲಿ ಪಲ್ಟಿಯಾಗಿ ಕಾರಿಗೆ ಡಿಕ್ಕಿಯಾಗಿದೆ.
ಬೆಳ್ಳಾರೆ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.