ಐವರ್ನಾಡು | ಕಾರು, ರಿಕ್ಷಾ ಮಧ್ಯೆ ಅಪಘಾತ – ಕಾರಿಗೆ ಹಾನಿ

ಪುತ್ತೂರು: ಸುಳ್ಯ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿರುವ ಸವಣೂರಿನ ರಾಕೇಶ್ ರೈ ಕೆಡೆಂಜಿ ಅವರ ಕಾರು ಹಾಗೂ ರಿಕ್ಷಾ ನಡುವೆ ಐವರ್ನಾಡಿನಲ್ಲಿ ಅಪಘಾತ ನಡೆದ ಬಗ್ಗೆ ವರದಿಯಾಗಿದೆ.

ರಾಕೇಶ್ ರೈ ಕೆಡೆಂಜಿ ಅವರು ಸುಳ್ಯಕ್ಕೆ ಹೋಗುತ್ತಿದ್ದಾಗ ಸುಳ್ಯ ಕಡೆಯಿಂದ ಬರುತ್ತಿದ್ದ ರಿಕ್ಷಾ ಮಧ್ಯೆ ಅಪಘಾತ ನಡೆದಿದ್ದು ಕಾರಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ರಿಕ್ಷಾ ವೇಗದಲ್ಲಿ ಬಂದು ತಿರುವಿನಲ್ಲಿ ಪಲ್ಟಿಯಾಗಿ ಕಾರಿಗೆ ಡಿಕ್ಕಿಯಾಗಿದೆ.

ಬೆಳ್ಳಾರೆ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

Leave A Reply

Your email address will not be published.