ಕೆಯ್ಯೂರು | ಅಚ್ಚು ಅರಿಕ್ಕಿಲ ಹೃದಯಾಘಾತದಿಂದ ಮೃತ್ಯು

ಪುತ್ತೂರು: ಕೆಯ್ಯೂರು ಗ್ರಾಮದ ಅರಿಕ್ಕಿಲ ನಿವಾಸಿ ಯುವಕನೋರ್ವ ಹೃದಯಾಘಾತದಿಂದ ಮನೆಯಲ್ಲಿ ಮೃತಪಟ್ಟ ಘಟನೆ ಮೇ.6ರಂದು ನಡೆದಿದೆ.

ಅರಿಕ್ಕಿಲ ನಿವಾಸಿ ಪುತ್ತು್ತು ಹಾಗೂ ಮರಿಯಮ್ಮ ದಂಪತಿಗಳ ಏಕೈಕ ಪುತ್ರ ಅಶ್ರಫ್(ಅಚ್ಚು) 30.ವ ಮೃತಪಟ್ಟ ಯುವಕ.

ಅವಿವಾಹಿತರಾಗಿರುವ ಅಶ್ರಫ್ ಸ್ಥಳೀಯವಾಗಿ ‘ಅಚ್ಚು’ ಎಂದೇ ಚಿರಪರಿಚತರಾಗಿದ್ದು ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಮೃತರು ತಂದೆ, ತಾಯಿ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

Leave A Reply

Your email address will not be published.