ಕಡಬ ತಾಲೂಕಿನಾದ್ಯಂತ ಗುಡುಗು ಗಾಳಿ ಸಹಿತ ಧಾರಕಾರ ಮಳೆ
![](https://hosakannada.com/wp-content/uploads/2024/07/First.jpeg)
ಕಡಬ: ಕಡಬ ತಾಲೂಕಿನಾದ್ಯಂತ ಸುತ್ತಮುತ್ತ ಭಾನುವಾರ ಸಾಯಂಕಾಲ ಗುಡುಗು ಗಾಳಿ ಸಹಿತ ಧಾರಕಾರ ಮಳೆಯಾಗಿದೆ.
![](https://hosakannada.com/wp-content/uploads/2024/07/Middle.jpeg)
![](https://hosakannada.com/wp-content/uploads/2020/04/kdb_april.26_4-274x500.jpg)
ತಾಲೂಕಿನ ಕೊೈಲ , ರಾಮಕುಂಜ, ಹಳೆನೇರೆಂಕಿ, ಆಲಂಕಾರು, ಕೋಡಿಂಬಾಳ, ಕೊಂಬಾರು, ನೂಜಿಬಾಳ್ತಿಲ, ಪೆರಾಬೆ, ಸವಣೂರು, ಕಾಣಿಯೂರು ಮೊದಲಾದ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಧಾರಕಾರ ಮಳೆಯಾಗಿದೆ.
![](https://hosakannada.com/wp-content/uploads/2020/04/kdb_april.26_3-667x500.jpg)
ಕೆಲವು ಕಡೆ ರೈತರ ಅಡಿಕೆ, ಬಾಳೆ ಗಿಡಗಳು ಧರಶಾಯಿಯಾಗಿ ಅಪಾರ ನಷ್ಟವಾಗಿದೆ. ಕಡಬ ಗ್ರಾಮದ ಸುತ್ತಮುತ್ತ ಕೆಲವು ಪ್ರದೇಶದಲ್ಲಿ ಅಲಿಕಲ್ಲು ಮಳೆಯಾಗಿದೆ.
![](https://hosakannada.com/wp-content/uploads/2020/04/kdb_april.26_6-281x500.jpg)
ಕಡಬ – ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಗೋಳಿತ್ತಡಿ ಎಂಬಲ್ಲಿ ಗಾಳಿ ತಳಿಯ ಹಲವು ಮರಗಳು ರಸ್ತೆಗೆ ಉರುಳಿತು. ಇದರಿಂದ ವಿದ್ಯುತ್ ತಂತಿ, ಕಂಬಗಳಿಗೆ ಹಾನಿಯಾಗಿದೆ. ಕಡಬ ಪೊಲೀಸರು ಸ್ಥಳಿಯರ ನೆರವಿನೊಂದಿಗೆ ಮರ ತೆರವುಗೊಳಿಸಿದರು. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು.