ಬೆಳ್ಳಿಪ್ಪಾಡಿಯಲ್ಲಿ ಗುಡ್ಡಕ್ಕೆ ಬೆಂಕಿ | ಒಂದು ಎಕ್ರೆ ಗುಡ್ಡೆ ಬೆಂಕಿಗೆ ಆಹುತಿ
ಪುತ್ತೂರು : ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿರುವ ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಗುಡ್ಡೆಗೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ನಡೆದಿದೆ.
![](https://hosakannada.com/wp-content/uploads/2024/07/First.jpeg)
ಇಲ್ಲಿನ ಬೆಳ್ಳಿಪ್ಪಾಡಿ ಕ್ರಾಸ್ನಲ್ಲಿರುವ ಲಲಿತಾ ಮಾದಪ್ಪ ಎಂಬವರಿಗೆ ಸೇರಿದ ಒಂದು ಎಕ್ರೆ ಗುಡ್ಡೆ ಬೆಂಕಿಗೆ ಆಹುತಿಯಾಗಿದೆ.
![](https://hosakannada.com/wp-content/uploads/2024/07/Middle.jpeg)
ಘಟನೆಯ ವಿಷಯವನ್ನು ಲಲಿತಾ ಮಾದಪ್ಪರವರ ಮನೆಯ ಎದುರು ಭಾಗದಲ್ಲಿರುವ ಕೋಡಿಂಬಾಡಿಯ ಉದ್ಯಮಿ ಅಶೋಕ್ ಕುಮಾರ್ ರೈಯವರು ಮೊದಲು ಗಮನಿಸಿದ್ದಾರೆ. ಅವರು ತಕ್ಷಣ ಬೆಂಕಿ ಬಿದ್ದಿರುವ ವಿಚಾರವನ್ನು ಲಲಿತಾರಿಗೆ ಮನೆಯವರಿಗೆ ತಿಳಿಸಿದ್ದಾರೆ. ಮತ್ತು ಆ ಮೂಲಕ ದೊಡ್ಡ ಪ್ರಮಾಣದ ಬೆಂಕಿಯ ಅಪಾಯವನ್ನು ತಪ್ಪಿಸಿದ್ದಾರೆ.
ಬಳಿಕ ಅಗ್ನಿಶಾಮಕ ದಳದವರು ಕೂಡಾ ಧಾವಿಸಿ ಬಂದಿದ್ದು ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದ್ದಾರೆ.
Comments are closed.