ಅಮರ ಸಂಘಟನೆಯಿಂದ ಅರ್ಹ ಫಲಾನುಭವಿಗಳಿಗೆ ಅಗತ್ಯ ವಸ್ತುಗಳ ವಿತರಣೆ
ಸುಳ್ಯ : ಪ್ರಸ್ತುತ ಜಗತ್ತನ್ನೇ ತನ್ನ ಬಾಹುಗಳಲ್ಲಿ ಹಿಡಿದು ಆಕ್ರಮಿಸಿ ನರಳಾಡಿಸುತ್ತಿರುವ ಕೋರೋನಾ ಮಹಾಮಾರಿಯ ವಿರುದ್ದ ಹೋರಾಡುವ ಮತ್ತು ಮುಂಜಾಗೃತ ಕ್ರಮವಾಗಿ ಅಮರ ಸಂಘಟನಾ ಸಮಿತಿ ಅಮರಮುಡ್ನೂರು ಇದರ ವತಿಯಿಂದ ಅರ್ಹರಿಗೆ ಅಗತ್ಯ ವಸ್ತುಗಳ ವಿತರಣೆ ಕಾರ್ಯಕ್ರಮ ನಡೆಯಿತು.
![](https://hosakannada.com/wp-content/uploads/2024/07/First.jpeg)
ಈಗಾಗಲೇ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದು ಇದೀಗ ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೋರೋಣ ಮಹಾಮಾರಿಯಿಂದ ತಮ್ಮ ಗ್ರಾಮದಲ್ಲಿ ಬಡತನವನ್ನು ಅನುಭವಿಸುತ್ತಿರುವ ಕುಟುಂಬಗಳನ್ನು ಆಯ್ದು ಅಕ್ಕಿ ಮತ್ತು ಅಗತ್ಯವಸ್ತುಗಳ ವಿತರಣೆಯು ಅಮರ ಸಂಘಟನಾ ಸಮಿತಿಯಿಂದ ನಡೆಯಿತು.
![](https://hosakannada.com/wp-content/uploads/2024/07/Middle.jpeg)
ಮೊದಲ ಹಂತದಲ್ಲಿ ಆರಿಸಿಕೊಂಡ ಕುಟುಂಬದ ವಿವರ :
1) ಕುಮಾರ ಸಿ.ಆರ್.ಸಿ ಪೈಲಾರು
2) ಸುಮಾ ದಾತಡ್ಕ
3) ಯಮುನ ಕೋಣಕಜೆ
4) ಚನಿಯ ಮೈರ್ಪಾಳ್ಳ
5) ರಮೇಶ ಕಂದಡ್ಕ
6) ಚನಿಯಾರು ಪದವು
7) ಸೀತಾ ಪದವು
8) ಚೆನ್ನು ಅಕ್ಕೋಜಿಪಾಲ್
9) ವಾರಿಜ ಪದವು ಇತರರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಮರ ಸಂಘಟನಾ ಸಮಿತಿಯ ಅಧ್ಯಕ್ಷರು, ಸರ್ವಸದಸ್ಯರು ಉಪಸ್ಥಿತರಿದ್ದರು
Comments are closed.