ಸವಣೂರು: ಪಡಿತರ ವಿತರಣೆಗೆ ವ್ಯವಸ್ಥೆ

Share the Article

ಸವಣೂರು ನ್ಯಾಯಬೆಲೆ ಅಂಗಡಿಯಲ್ಲಿ ರೇಶನ್ ವಿತರಣೆ ಸಂದರ್ಭದಲ್ಲಿ ಟೋಕನ್ ವ್ಯವಸ್ಥೆ, ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಒಂದು ಮೀಟರ್ ಅಂತರದಲ್ಲಿ ಕುರ್ಚಿಗಳ ವ್ಯವಸ್ಥೆಯನ್ನು ಗ್ರಾಹಕರಿಗೆ ಮಾಡುವ ಮೂಲಕ ಸುಲಲಿತವಾಗಿ ರೇಶನ್ ನೀಡುವ ವ್ಯವಸ್ಥೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಇಂದಿರಾ ಬಿ ಕೆ, ಸಿ ಎ ಅಧ್ಯಕ್ಷ ಶ್ರೀ ಗಣೇಶ್ ನಿಡ್ವಣ್ಣಾಯ,ಉಪಾಧ್ಯಕ್ಷ ಶ್ರೀ ತಾರಾನಾಥ ಕಾಯರ್ಗ, ಕಾರ್ಯನಿರ್ವಹಣಾಧಿಕಾರಿ ಶ್ರೀ ಚಂದ್ರಶೇಖರ ,ಗ್ರಾ. ಪಂ ಸದಸ್ಯ ಶ್ರೀ ಸತೀಶ್ ಬಲ್ಯಾಯ, ಸೇವಾಭಾರತಿ ಕಾರ್ಯಕರ್ತ ರಾಕೇಶ್ ರೈ ಸೇರಿದಂತೆ ಮತ್ತಿತರ ಕಾರ್ಯಕರ್ತರು ಹಾಗೂ ಸಂಘದ ಸಿಬ್ಬಂದಿಗಳು ಸಹಕರಿಸಿದರು

Leave A Reply

Your email address will not be published.