ಸುಳ್ಯ| ಬೀರಮಂಗಲ ನಾಗರಿಕ ಸಮಿತಿಯ ನೇತೃತ್ವದಲ್ಲಿ ಮನೆ ಬಾಗಿಲಿಗೆ ತರಕಾರಿ ಪೂರೈಕೆ
ಸುಳ್ಯ: ಬೀರಮಂಗಲ ನಾಗರಿಕ ಸಮಿತಿ ಹಾಗೂ ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರ ಕ್ರಾಸ್ತ ರವರ ನೇತೃತ್ವದಲ್ಲಿ ಕೊರೊನ ಮಹಾಮಾರಿಯ ವಿರುದ್ಧ ಭಾರತ ಸರಕಾರ ಘೋಷಿಸಿದ ಲಾಕ್ ಡೌನ್ ನ ಪರಿಣಾಮ ಜನರು ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ,ಬೀರಮಂಗಲದ ಜನತೆಗೆ ಮೈಸೂರು ಜಿಲ್ಲೆಯ ಕೆ.ಆರ್.ನಗರದ ತರಕಾರಿ ವ್ಯಾಪಾರಸ್ಥರ ಮುಖಾಂತರ ಮಾತುಕತೆ ನಡೆಸಿ ಬೀರಮಂಗಲದ ಜನತೆಗೆ ಇಂದು ಅತೀ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ತರಕಾರಿ ವಿತರಿಸಲು ಸಹಕರಿಸಿದರು.
![](https://hosakannada.com/wp-content/uploads/2024/07/First.jpeg)
ದಕ್ಷಿಣ ಬೀರಮಂಗಲದ ಪ್ರತಿ ಮನೆಗಳಿಗೆ ತೆರಳಿ ತರಕಾರಿ ವಿತರಣೆ ಬಗ್ಗೆ ಮಾಹಿತಿ ನೀಡಲು ಸಹಕರಿಸಿದ ಚೆನ್ನಕೇಶವ ಬಂಗ್ಲೆಗುಡ್ಡೆ ಇನ್ನೆರಡು ದಿನಗಳಲ್ಲಿ ಮತ್ತೆ ನಿಮ್ಮ ಮನೆ ಬಾಗಿಲಿಗೆ ತರಕಾರಿ ವಿತರಣಾ ವ್ಯವಸ್ಥೆ ನಡೆಯಲಿದೆ ಎಂದು ಅವರು ಹೇಳಿದರು.
![](https://hosakannada.com/wp-content/uploads/2024/07/Middle.jpeg)
ವಿತರಣಾ ಸಂಧರ್ಭ ನಗರ ಪಂಚಾಯತ್ ನ ಮುಖ್ಯಾಧಿಕಾರಿಗಳು, ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರ ಕ್ರಾಸ್ತಾ ಹಾಗೂ ನಗರ ಪಂಚಾಯತ್ ನ ಮಾಜಿ ಸದಸ್ಯರುಗಳಾದ ಶ್ರೀಮತಿ ಸುನಿತಾ ಡಿ’ಸೋಜ ಹಾಗೂ ಶ್ರೀಮತಿ ಹಾಜಿರ ಅವರು ಉಪಸ್ಥಿತರಿದ್ದರು.
ಜೊತೆಗೆ ಬೀರಮಂಗಲ ನಾಗರಿಕ ಸಮಿತಿಯ ಗೌರವ ಸಲಹೆಗಾರರಾದ ಬೆಳ್ಯಪ್ಪ ಗೌಡ.ಡಾ.ಪೂವಪ್ಪ ಕಣಿಯೂರು, ಅಜಿತ್ ಬೀರಮಂಗಲ ಹಾಗೂ ದೀಪಕ್ ಲೋಬೊರವರು ಉಪಸ್ಥಿತರಿದ್ದರು