ಕೊರೋನಾ ವ್ಯಾಧಿ ಬರುವ ಭೀತಿಯಿಂದ ಉಡುಪಿಯಲ್ಲಿ ಓರ್ವ ವ್ಯಕ್ತಿ ಆತ್ಮಹತ್ಯೆ

ಉಡುಪಿ : ಕೊರೋನಾ ವ್ಯಾದಿ ಹರಡುವ ಭೀತಿಯಿಂದ ಉಡುಪಿಯಲ್ಲಿ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಕ್ಷಿಪ್ತ ಘಟನೆ ನಡೆದಿದೆ.

ಉಡುಪಿ ಜಿಲ್ಲಿಯ ಬ್ಹ್ರಹ್ಮಾವರ ತಾಲೂಕಿನ ಉಪ್ಪೂರಿನ ನಿವಾಸಿ ಆಗಿರುವ 55 ವರ್ಷ ವಯಸ್ಸಿನ ಗೋಪಾಲಕೃಷ್ಣ ಮಡಿವಾಳ ಎಂಬವರೇ ಈ ವಿಕ್ಷಿಪ್ತ. ಆತ , ತಾನು ಕೊರೋನಾ ಭೀತಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಆತ ಬರೆದಿಟ್ಟಿದ್ದಾರೆ.

ಕೊರೋನಾ ಬಂದರೆ ಎಂಬ ಭೀತಿಯಿಂದಾಗಿ ಆತ ಆತ್ಮಹತ್ಯೆಗೆ ಕೈ ಹಾಕಿದ್ದಾರೆ. ಆದರೆ ಮನೆಯವರು ಮತ್ತು ಊರವರು ಹೇಳುವಂತೆ ಆ ವ್ಯಕ್ತಿಗೆ ಕೊರೋನಾ ಯಾವುದೇ ರೋಗಲಕ್ಷಣಗಳಿರಲಿಲ್ಲ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೋನಾ ಬಂದ ಕೂಡಲೇ ಜನ ಸಾಯುವುದಿಲ್ಲ. ದುರದೃಷ್ಟವಶಾತ್ ಕೊರೋನಾ ಬಂದು ಗುಣಮುಖವಾಗದೆ ಹೋದರೆ ಮಾತ್ರ ಸಾಯುತ್ತಾರೆ, ಆತ್ಮಹತ್ಯೆಯಲ್ಲಿ ಖಚಿತವಾಗಿ ಸಾಯುತ್ತಾರೆ. ಸಾಯಲು ಇರುವ ಕಾರಣ ಮತ್ತು ಲಾಜಿಕ್ ಅರ್ಥವಾಗುವುದಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave A Reply

Your email address will not be published.