ಮಂಗಳೂರು ನಗರ | ಸೆಕ್ಷನ್ 144 ಆದೇಶ ಉಲ್ಲಂಘಿಸಿದ 7 ಜನರ ಬಂಧನ

ಮಂಗಳೂರು : ನಗರದಲ್ಲಿ ಸರಕಾರದ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ಏಳು ಜನರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಬಂಧಿಸಿರುವ ವ್ಯಕ್ತಿಗಳನ್ನು ರಾಹುಲ್ ಪಾಂಡೆ, ಅಸ್ಸಾಂ, ಅಮೀರ ಹಾಜು ಅನ್ಸಾರಿ, ಉತ್ತರ ಪ್ರದೇಶ, ಜೇಮ್ಸ್ ಹಾಸನ, ಪ್ರಭಾತ್ ಟಾಕೀಸ್ ಕಾವಲುಗಾರ., ಉಮೇಶ ಚಿಕ್ಕಮಗಳೂರು, ಜೀವನ ದೀಪ ಪಬ್ಲಿಕೇಷನ್ಸ್, ಬಲರಾಮ ಚೌಧರಿ ರಾಜಸ್ಥಾನ, ಸಿದ್ಧೀಕ್ ಉಳ್ಳಾಲ, ವಿನಯ ಕೃಷ್ಣನಗರ, ತೊಕ್ಕೊಟ್ಟು ಎಂದು ಗುರುತಿಸಲಾಗಿದೆ.

ಅನಗತ್ಯ ಕಾರಣಗಳನ್ನು ಹೇಳಿಕೊಂಡು ರಸ್ತೆಗೆ ಇಳಿದರೆ ಕಾನೂನು ಕಠಿಣ ಕ್ರಮ ಜರಗಿಸುವ ಎಚ್ಚರಿಕೆ ಕೂಡ ನೀಡಿದ್ದರು.ಇದನ್ನು ಉಲ್ಲಂಘನೆ ಮಾಡಿದಕ್ಕೆ ಈಗ ಅಂದರ್‌ ಆಗಿದ್ದಾರೆ.

ಮಂಗಳೂರು ನಗರದೆಲ್ಲೆಡೆ ಪೊಲೀಸರು ಭಾರೀ ಕಟ್ಟೆಚ್ಚರ ವಹಿಸಲಾಗಿದೆ.

Leave A Reply

Your email address will not be published.