ಕೊರೊನಾ ಭೀತಿ | ಜನತಾ ಕರ್ಫ್ಯೂ ಹೇರಿಕೆ | ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನೇರ ಪ್ರಸಾರ

ದೇಶದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿ ಜಾರಿಯಾಗಿದೆ. ಆದರೆ ಮೋದಿಯವರು ಈ ಸಾರಿ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. ಅವರು ಈ ಭಾನುವಾರ ಒಂದು ದಿನ ಸ್ವ ಇಚ್ಛೆಯ ಜನತಾ ಕರ್ಫ್ಯೂ ಗೆ ಕರೆ ನೀಡಿದ್ದಾರೆ.

ಕೊರೊನಾ ಭೀತಿ | ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನೇರ ಪ್ರಸಾರ

ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಮನೆಯಿಂದ ಯಾರು ಹೊರ ಬರದೇ ಇರುವಂತೆ ಅವರು ಕೇಳಿಕೊಂಡಿದ್ದಾರೆ. ಜನತಾ ಕರ್ಫ್ಯೂ ಅನ್ನು ಕಡ್ಡಾಯವಾಗಿ ಪಾಲಿಸಲು ಕರೆ ನೀಡಿದ್ದಾರೆ.

ತುರ್ತು ಅನಿವಾರ್ಯವಾದರೆ ಮಾತ್ರ ಮನೆಯಿಂದ ಹೊರಬರಲು ಸೂಚನೆ. ಮುಂದಿನ ದಿನಗಳಿಗೆ ನಾವು ರೆಡಿ ಆಗಬೇಕಾಗಿದೆ ಎಂದವರು ಈ ಸಂದರ್ಭದಲ್ಲಿ ಕರೋನ ವ್ಯಾಧಿಯನ್ನು ಮಹಾಯುದ್ಧಕ್ಕೆ ಹೋಲಿಸಿ ಜನತೆಯಲ್ಲಿ ಮನವಿ ಮಾಡಿಕೊಂಡರು.

ಮನೆಯಿಂದಲೇ ಕೆಲಸ ಮಾಡಲು ಆಗ್ರಹ. ನೀವು ಮನೆಯಲ್ಲಿದ್ದರೆ ಕೋರೋ ನಾ ತಡೆಯಬಹುದು. ದೇಶದ ಜನರ ಆರೋಗ್ಯಕ್ಕಾಗಿ ಕರ್ಫ್ಯೂ ಪಾಲಿಸಿ.. ಪ್ರಧಾನಿ ಮೋದಿ.

ಈ ವಿಷಯವನ್ನು ಪ್ರತಿಯೊಬ್ಬರೂ ಕನಿಷ್ಠ ಹತ್ತು ಮಂದಿಗೆ ಕರೆ ಮಾಡಿ ತಿಳಿಸಿ.ಭಾನುವಾರ ಸಂಜೆ 5 ಗಂಟೆಗೆ ಚಪ್ಪಾಳೆ ತಟ್ಟುವ ಮೂಲಕ ಅವನ ವಿರುದ್ಧ ಕೆಲಸ ಮಾಡುವ ಜನರಿಗೆ ಗೌರವ ಸೂಚಿಸಿ….ನರೇಂದ್ರ ಮೋದಿ.

Leave A Reply

Your email address will not be published.